ADVERTISEMENT

ದ್ವಾರಸಮುದ್ರ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:25 IST
Last Updated 24 ಆಗಸ್ಟ್ 2024, 15:25 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಹಳೇಬೀಡು: ಇಲ್ಲಿಯ ದ್ವಾರ ಸಮುದ್ರ ಕೆರೆಯಲ್ಲಿ ಶನಿವಾರ ಮುಳುಗಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ADVERTISEMENT

ಬೂದಿಗುಂಡಿ ಬಡಾವಣೆಯ ನಿವಾಸಿ ಚಂದ್ರಶೇಖರ (50) ಮೃತ ವ್ಯಕ್ತಿ.

ಶುಕ್ರವಾರ ಚಂದ್ರಶೇಖರ ನಾಪತ್ತೆಯಾಗಿದ್ದರು. ಕೆರೆ ತೀರದಲ್ಲಿ ಅವರ ಪಾದರಕ್ಷೆ ಪತ್ತೆಯಾಗಿದ್ದವು. ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು. ಕೆರೆಯಲ್ಲಿ ಶುಕ್ರವಾರ ಶೋಧ ಕಾರ್ಯ ನಡೆದಿತ್ತು. ಆದರೆ ಮೃತ ದೇಹ ದೊರಕಲಿಲ್ಲ. ಶನಿವಾರ ಮೃತದೇಹ ಕೆರೆ ನೀರಿನಲ್ಲಿ ತೇಲುತ್ತಿದ್ದರಿಂದ ಚಂದ್ರಶೇಖರ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.