ADVERTISEMENT

ಕಾರು–ಬೈಕ್ ನಡುವೆ ಅಪಘಾತ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 4:22 IST
Last Updated 30 ಸೆಪ್ಟೆಂಬರ್ 2020, 4:22 IST
29ಎಚ್ಆರ್‌ಎಸ್1 ಹಿರೀಸಾವೆ ಸಮೀಪ ಮಂಗಳವಾರ ನಡೆದ ಅಪಘಾತದಲ್ಲಿ ಮೃತ ಪಟ್ಟ ರಾಜು (45)
29ಎಚ್ಆರ್‌ಎಸ್1 ಹಿರೀಸಾವೆ ಸಮೀಪ ಮಂಗಳವಾರ ನಡೆದ ಅಪಘಾತದಲ್ಲಿ ಮೃತ ಪಟ್ಟ ರಾಜು (45)   

ಹಿರೀಸಾವೆ: ಕಾರು ಮತ್ತು ಬೈಕ್ ನಡುವೆ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟು, ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡೇರಿ ಗೇಟ್ ಬಳಿ ನಡೆದಿದೆ.

ದೊಡ್ಡೇರಿ ಕಾವಲು ಗ್ರಾಮದ ಲೇಟ್ ಗಂಗಯ್ಯನ ಮಗು ರಾಜು (45) ಮೃತ ವ್ಯಕ್ತಿ. ಬೈಕ್ ನ ಹಿಂಬದಿಯಲ್ಲಿ ಕೂತಿದ್ದ ಅದೇ ಗ್ರಾಮದ ಆನಂದ್ ಎಂಬುವವರ ಪತ್ನಿ ಸರಸಮ್ಮ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹಿರೀಸಾವೆಯಿಂದ ಗ್ರಾಮಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದರು. ದೊಡ್ಡೇರಿ ಗೇಟ್ ಬಳಿ, ರಸ್ತೆ ದಾಟುತ್ತಿದ್ದಾಗ, ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತ ಮಾಡಿದ ಕಾರು ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದೆ. ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಹಿರೀಸಾವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.