ಅರಸೀಕೆರೆ: ಬಾವಿಯಲ್ಲಿ ಬಿದ್ದಿದ್ದ ಕೋಳಿ ಎತ್ತಲು ಹೋದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ಬಾಗಲಘಟ್ಟ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದೂತಯ್ಯ ಅವರ ಕೋಳಿಯೊಂದು ಬಾವಿಯಲ್ಲಿ ಬಿದ್ದಿತ್ತು. ಅದನ್ನು ಮೇಲೆತ್ತಲು ವೀರಭದ್ರಪ್ಪ (48) ಅವರು ಬಾವಿಗೆ ಇಳಿದು ಕೋಳಿಯನ್ನು ಎತ್ತಿಕೊಂಡು ಹಗ್ಗವೇರಿ ಬರುತ್ತಿದ್ದಾಗ ಹಗ್ಗ ತುಂಡಾಗಿದ್ದರಿಂದ ಬಾವಿಗೆ ಬಿದ್ದಿದ್ದಾರೆ. ಬಾವಿಯಲ್ಲಿ ನೀರಿಲ್ಲದ್ದರಿಂದ ಕಲ್ಲಿಗೆ ತಲೆ ಬಡಿದು ತೀವ್ರ ರಕ್ತಸ್ರಾವವಾಗಿ ಅಲ್ಲೇ ಮೃತಪಟ್ಟಿದ್ದಾರೆ.
ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದರು. ಅಗ್ನಿಶಾಮಕ ಠಾಣೆಯ ಪಿ.ಎಸ್.ಐ ರೇವಣ್ಣೆಗೌಡ ಮತ್ತು ಸಿಬ್ಬಂದಿ ವರ್ಗದವರು ಬಾವಿ ಒಳಗಡೆಯಿಂದ ಮೃತದೇಹವನ್ನು ಹೊರತೆಗೆದರು. ಮೃತರಿಗೆ ಪತ್ನಿ ಮತ್ತು ಮೂವರು ಪುತ್ರಿಯರು ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.