ADVERTISEMENT

ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ: ಕೆ.ಎನ್.ರಾಜಣ್ಣಗೆ ಪ್ರಜ್ವಲ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 9:43 IST
Last Updated 1 ಜುಲೈ 2022, 9:43 IST
   

ಹಾಸನ: ದೇವೇಗೌಡರ ಕಾಲಿನ ದೂಳಿಗೂ ಸಮನಲ್ಲದ ಕೆ.ಎನ್.‌ರಾಜಣ್ಣ‌ ಇದೇ ರೀತಿ‌ ಹುಚ್ಚಾಟದ ಹೇಳಿಕೆ ನೀಡಿದರೆ, ಜನರು ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಹುಚ್ಚಾಟಕ್ಕೆ ಜನ ಅವರನ್ನು ಮನೆಯಲ್ಲಿ ಕೂಡ್ರಿಸಿದ್ದಾರೆ. ಅವನೊಬ್ಬ ದೊಡ್ಡ ಕಳ್ಳ ಎನ್ನುವುದು ಜನರಿಗೆ ಗೊತ್ತಿದೆ ಎಂದರು.

ರಾಜಕೀಯದಲ್ಲಿ ಇರುವವರಿಗೆ ಒಂದು ಮಿತಿ‌ಇದೆ. ಸಾರ್ವಜನಿಕ‌ ಜೀವನದಲ್ಲಿ ಇರುವುದಕ್ಕೆ ರಾಜಣ್ಣ ನಾಲಾಯಕ್. ಅಂಥವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.