ADVERTISEMENT

ಪಿಡಿಒ ಮೇಲೆ ಮಚ್ಚಿನಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 19:50 IST
Last Updated 1 ಸೆಪ್ಟೆಂಬರ್ 2020, 19:50 IST
ಮಚ್ಚಿನಿಂದ ಹಲ್ಲೆಗೊಳಗಾದ ಪಿಡಿಒ ಮಹಮದ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಚ್ಚಿನಿಂದ ಹಲ್ಲೆಗೊಳಗಾದ ಪಿಡಿಒ ಮಹಮದ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.   

ಆಲೂರು: ಕರ್ತವ್ಯ ನಿರತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ವ್ಯಕ್ತಿಯೊಬ್ಬ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಪಾಳ್ಯ ಹೋಬಳಿ ಮಡಬಲು ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಪಿಡಿಒ ಮಹಮದ್ ಅವರ ಮೇಲೆ, ಅದೇ ಗ್ರಾಮದ ಪುಟ್ಟರಾಜು ಹಲ್ಲೆ ಮಾಡಿದ್ದು ಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.

‘ಸೋಮವಾರ ಕಚೇರಿಗೆ ಬಂದ ಪುಟ್ಟರಾಜು ನನಗೆ ಮೆಣಸು ಬೆಳೆಯಲು ಬಳ್ಳಿ ಏಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು. ಈ ಬಾರಿ ಯೋಜನೆಯಲ್ಲಿ ತಮ್ಮ ಹೆಸರು ಸೇರಿಲ್ಲ. ಮುಂದಿನ ಬಾರಿ ಕೊಡುವುದಾಗಿ ತಿಳಿಸಿದೆನು. ಅದಕ್ಕೆ ನಾಳೆ ಬಂದು ನೋಡಿಕೊಳ್ಳುತ್ತೇನೆ ಎಂದು ಹೇಳಿ ಹೋದನು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಈವಿಷಯ ತಿಳಿಸಿದಾಗ ಪೊಲೀಸರಿಗೆ ದೂರು ಕೊಡಲು ತಿಳಿಸಿದರು. ನಾನು ದೂರು ನೀಡಿದೆ. ಮಂಗಳವಾರ ನಾನು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬಂದು ನನ್ನ ಮೇಲೆ ಪೊಲೀಸ್ ದೂರು ಕೊಡುತ್ತೀಯಾ ಎಂದು ಏಕಾಏಕಿ ಮಚ್ಚು ಬೀಸಿದನು. ಆಗ ತಕ್ಷಣ ನಾನು ಬಗ್ಗಿದಾಗ ಎಡ ಭುಜಕ್ಕೆ ಬಲವಾದ ಪೆಟ್ಟು ಬಿತ್ತು. ಎರಡು ಕಂಪ್ಯೂಟರ್‌ಗಳು ಪುಡಿಯಾಗಿವೆ’ ಎಂದು ಮಹಮದ್‌ ವಿವರಿಸಿದರು.

ADVERTISEMENT

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಯನ, ಪಿಡಿಒ ಸಂಘದ ಅಧ್ಯಕ್ಷ ರಂಗಸ್ವಾಮಿ ಘಟನೆಯನ್ನು ಖಂಡಿಸಿ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.