ADVERTISEMENT

ಮಳೆ ಹಾನಿ: ಶ್ರವಣಬೆಳಗೊಳಕ್ಕೆ ಸಚಿವರಾದ ಅಶೋಕ್‌, ಗೋಪಾಲಯ್ಯ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 12:36 IST
Last Updated 4 ಆಗಸ್ಟ್ 2022, 12:36 IST
   

ಹಾಸನ: ಕಂದಾಯ ಸಚಿವ ಆರ್. ಅಶೋಕ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ‌.ಗೋಪಾಲಯ್ಯ ಅವರು ಗುರುವಾರ ಸಂಜೆ ಶ್ರವಣಬೆಳಗೊಳಕ್ಕೆಭೇಟಿ ನೀಡಿ ಮಳೆ ಹಾನಿ ಪ್ರದೇಶಗಳನ್ನು ಪರಿಶೀಲಿಸಿದರು.

ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದಲ್ಲಿ ಉಂಟಾಗಿರುವ ಕಲ್ಲುಗಳ ಕುಸಿತ ಸ್ಥಳ ವೀಕ್ಷಿಸಿದ ಉಭಯ ಸಚಿವರು, ತಕ್ಷಣವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಇದೇ ವೇಳೆ ಶ್ರವಣಬೆಳಗೊಳದಲ್ಲಿ ‌ಮನೆ ಹಾನಿಗೀಡಾದ ಫಲಾನುಭವಿಗಳಿಗೆ ತಕ್ಷಣದ ಪರಿಹಾರದ ಚೆಕ್ ವಿತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.