ಹೊಳೆನರಸೀಪುರ: ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ದಾಳಗೌಡನಹಳ್ಳಿ ಗ್ರಾಮದಲ್ಲಿ ವೈಯಕ್ತಿಕ ದ್ವೇಷಕ್ಕಾಗಿ ಡಿ.ಕೆ.ಯೋಗೇಶ್ ಎಂಬುವರ 2 ಎಕರೆ ಜಮೀನಿನ ರೇಷ್ಮೆ ಗಿಡಕ್ಕೆ ಸಿಂಪಡಿಸಬಾರದ ಕ್ರಿಮಿನಾಶಕ ಸಿಂಪಡಿಸಿ ಬೆಳೆನಾಶವಾಗಿ ಹುಳುಗಳೂ ಸತ್ತುಹೋಗಿವೆ.
ಇವರ ಮೇಲೆ ಮೊದಲಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಆಗಾಗ ಜಗಳ ಮಾಡುತ್ತಿದ್ದ ಪಕ್ಕದ ಜಮೀನಿನ ರೈತ ಮಹದೇವ, ಈತನ ಪುತ್ರ ಸಂಜು ಹಾಗೂ ಸುಷ್ಮಾ ಯೋಗೇಶನ ಜಮೀನಿಗೆ ಅತಿಕ್ರಮವಾಗಿ ಬಂದು ಔಷಧಿ ಸಂಪಡಿಸಿ ಹೋಗುತ್ತಿದ್ದನ್ನು ಕಂಡ ಯೋಗೇಶ್ ಹಳ್ಳಿಮೈಸೂರು ಠಾಣೆ ಹಾಗೂ ರೇಷ್ಮೆ ಇಲಾಖೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಹಳ್ಳಿಮೈಸೂರು ಠಾಣೆ ಎಸ್.ಐ ಪ್ರಕರಣ ದಾಖಲಿಸಿದ್ದಾರೆ.
ರೈತ ಯೋಗೇಶ್ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ನನ್ನ ರೇಷ್ಮೆ ಬೆಳೆ ನಾಶ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ನನಗಾಗಿರುವ ನಷ್ಟ ಭರಿಸಿಕೊಡಬೇಕೆಂದು ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.