ADVERTISEMENT

ಬೇಲೂರು: ಕಸಾಯಿ ಖಾನೆ ಮೇಲೆ ತಹಶೀಲ್ದಾರ್ ದಾಳಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 14:14 IST
Last Updated 14 ಆಗಸ್ಟ್ 2024, 14:14 IST
ಬೇಲೂರಿನ ಮುಸ್ತಾಫ ಬೀದಿಯಲ್ಲಿ ಅನಾಧಿಕೃತವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಕಸಾಯಿ ಖಾನೆ ಮೇಲೆ  ತಹಶೀಲ್ದಾರ್ ಎಂ.ಮಮತ  ಈಚೆಗೆ ದಾಳಿ ನಡೆಸಿದರು.
ಬೇಲೂರಿನ ಮುಸ್ತಾಫ ಬೀದಿಯಲ್ಲಿ ಅನಾಧಿಕೃತವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಕಸಾಯಿ ಖಾನೆ ಮೇಲೆ  ತಹಶೀಲ್ದಾರ್ ಎಂ.ಮಮತ  ಈಚೆಗೆ ದಾಳಿ ನಡೆಸಿದರು.   

ಬೇಲೂರು: ಇಲ್ಲಿನ ಮುಸ್ತಾಫ ಬೀದಿಯಲ್ಲಿ ಅನಧಿಕೃತವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಕಸಾಯಿ ಖಾನೆ ಮೇಲೆ ತಹಶೀಲ್ದಾರ್ ಎಂ.ಮಮತ ಈಚೆಗೆ ದಾಳಿ ನಡೆಸಿದರು.

ಈ ಹಿಂದೆಯೂ ಪುರಸಭೆಯಿಂದ ಗೋಮಾಂಸ ಮಾರಾಟ ನಡೆಯುವ ಕಸಾಯಿಖಾನೆ ಮೇಲೆ ದಾಳಿ ನಡೆಸಿ, ಕಠಿಣ ಎಚ್ಚರಿಕೆ ನೀಡಿ, ಕೇಸು ದಾಖಲಿಸಿದರು ಕೂಡ ಈ ಕೃತ್ಯ ಮುಂದುವರಿಯುತ್ತಿದೆ, ಇನ್ನು ಮುಂದೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೇಲೂರಿನಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಮತ ಎಚ್ಚರಿಕೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್ ಮಾತನಾಡಿ, ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ, ನಾಲ್ಕು ಟನ್ ಗೋಮಾಂಸ ವಶಪಡಿಸಿಕೊಳ್ಳಲಾಗಿದೆ, ಪ್ರಕರಣವನ್ನು ದಾಖಲಿಸಲಾಗಿದೆ. ಆದರೂ ಸಹ ಕೆಲವರು ಕದ್ದು ಮುಚ್ಚಿ ಮಾರಾಟ ಮಾಡುತ್ತಿದ್ದಾರೆ. ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುವುದು ಕಂಡುಬಂದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.