ADVERTISEMENT

ಅ.7: ತಂಬಾಕು ಮಾರುಕಟ್ಟೆ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 2:25 IST
Last Updated 26 ಸೆಪ್ಟೆಂಬರ್ 2020, 2:25 IST
ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯ ಆವರಣದಲ್ಲಿ ಚೀಲದ ತಾಟುಗಳನ್ನು ರೈತರು ಪಡೆಯುತ್ತಿರುವುದು
ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯ ಆವರಣದಲ್ಲಿ ಚೀಲದ ತಾಟುಗಳನ್ನು ರೈತರು ಪಡೆಯುತ್ತಿರುವುದು   

ರಾಮನಾಥಪುರ (ಕೊಣನೂರು): ಹದಮಾಡಿರುವ ತಂಬಾಕನ್ನು ಮಾರು ಕಟ್ಟೆಗೆ ತಂದು ಮಾರಾಟಮಾಡಲು ರೈತರು ಸಿದ್ಧತೆಯಲ್ಲಿದ್ದಾರೆ.

2 ತಿಂಗಳಿಂದ ವರ್ಜಿನಿಯಾ ಹೊಗೆಸೊಪ್ಪಿನ ಎಲೆ ಮುರಿದು ಹದ ಮಾಡಿ ಮಾರಾಟಕ್ಕೆ ಅಣಿ ಗೊಳಿಸುತ್ತಿದ್ದಾರೆ. ಅ.7ರಿಂದ ತಂಬಾಕು ಹರಾಜು ಮಾರು ಕಟ್ಟೆ ಆರಂಭಗೊಳ್ಳಲಿದೆ ಎಂದು ತಂಬಾಕು ಮಂಡಳಿ ಮೂಲಗಳು ತಿಳಿಸಿವೆ.

ಬೇಲ್‌ಗಳನ್ನು ಕಟ್ಟಲು ಚೀಲದ ತಾಟು ನೀಡುತ್ತಿದ್ದು, ಪರವಾನಗಿ ಹೊಂದಿರುವ ಬೆಳೆಗಾರರು ಚೀಲದ ತಾಟುಗಳನ್ನು ಪಡೆದು ಬೇಲ್ ಕಟ್ಟುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.