ADVERTISEMENT

ಬೇಲೂರು | ಗಿಡಗಳ ನೆಲಸಮ; ನೋವು ತಂದಿದೆ: ಸಾಲುಮರದ ತಿಮ್ಮಕ್ಕ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 3:48 IST
Last Updated 15 ಆಗಸ್ಟ್ 2025, 3:48 IST
ಬೇಲೂರಿನ ತಾಲ್ಲೂಕು ಕಚೇರಿ ಆವರಣದಲ್ಲಿ ಕಿತ್ತುಹಾಕಲಾದ ಗಿಡಗಳನ್ನು ರಾಜ್ಯಸರ್ಕಾರದ ಪರಿಸರ ರಾಯಭಾರಿ ಸಾಲು ಮರದ ತಿಮ್ಮಕ್ಕ ಪರಿಶೀಲಿಸಿದರು. ತಿಮ್ಮನಕ್ಕನವರ ದತ್ತುಪುತ್ರ ಬಳ್ಳೂರು ಉಮೇಶ್ ಪಾಲ್ಗೊಂಡಿದ್ದರು 
ಬೇಲೂರಿನ ತಾಲ್ಲೂಕು ಕಚೇರಿ ಆವರಣದಲ್ಲಿ ಕಿತ್ತುಹಾಕಲಾದ ಗಿಡಗಳನ್ನು ರಾಜ್ಯಸರ್ಕಾರದ ಪರಿಸರ ರಾಯಭಾರಿ ಸಾಲು ಮರದ ತಿಮ್ಮಕ್ಕ ಪರಿಶೀಲಿಸಿದರು. ತಿಮ್ಮನಕ್ಕನವರ ದತ್ತುಪುತ್ರ ಬಳ್ಳೂರು ಉಮೇಶ್ ಪಾಲ್ಗೊಂಡಿದ್ದರು    

ಬೇಲೂರು: ‘ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಹಾಕಿದ್ದ ಗಿಡಗಳನ್ನು ಕಿತ್ತುಹಾಕಿರುವುದು ನೋವು ತಂದಿದೆ’ ಎಂದು ರಾಜ್ಯ ಸರ್ಕಾರದ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ಹೇಳಿದರು.

ಇಲ್ಲಿನ ಕಚೇರಿ ಆವರಣಕ್ಕೆ ಗುರುವಾರ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ‘ನಮ್ಮ ಟ್ರಸ್ಟ್ ವತಿಯಿಂದ ನೆಡಲಾಗಿದ್ದ ನೇರಲೆ ಹಾಗೂ ಇತರೆ ಗಿಡಗಳನ್ನು ತೆರವುಗೊಳಿಸಿರುವ ಬಗ್ಗೆ ಸರ್ಕಾರದ ಗಮನ ಸೆಳೆಯುವೆ’ ಎಂದರು.

ಅವರ ದತ್ತುಪುತ್ರ ಬಳ್ಳೂರು ಉಮೇಶ್ ಮಾತನಾಡಿ, ‌‘ಗಿಡಗಳನ್ನು ನೆಟ್ಟು ಬೆಳೆಸುವುದು ಕಷ್ಟ ಎಂದು ಎಲ್ಲರಿಗೂ ಗೊತ್ತು. ಈ ಬಗ್ಗೆ ತಹಶೀಲ್ದಾರ್ ಉಡಾಫೆ ಉತ್ತರ ನೀಡಿದ್ದಾರೆ. ಈ ಬಗ್ಗೆ ಅರಣ್ಯ ಸಚಿವರ ಗಮನ ಸೆಳೆದಿರುವೆ.  ತಹಶಿಲ್ದಾರ್ ವಿರುದ್ಧ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸುವೆ’ ಎಂದರು.

ADVERTISEMENT

‘ತಕ್ಷಣ ಅಮಾನತು ಮಾಡದಿದ್ದಲ್ಲಿ ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ಧರಣಿ ಕೂರಲಾಗುವುದು’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.