ADVERTISEMENT

ಬಿರುಗಾಳಿ ಸಹಿತ ಮಳೆ: ಅಪಾರ ಹಾನಿ 

​ಪ್ರಜಾವಾಣಿ ವಾರ್ತೆ
Published 28 ಮೇ 2020, 17:43 IST
Last Updated 28 ಮೇ 2020, 17:43 IST
ಶ್ರವಣಬೆಳಗೊಳ ಹೋಬಳಿಯ ಜುಟ್ಟನಹಳ್ಳಿ ಸಂತೆ ಮೈದಾನದ ಸಮೀಪದಲ್ಲಿ ರವಿಗೌಡ ಅವರ ಆಲೆಮನೆ ಕುಸಿದಿರುವುದು
ಶ್ರವಣಬೆಳಗೊಳ ಹೋಬಳಿಯ ಜುಟ್ಟನಹಳ್ಳಿ ಸಂತೆ ಮೈದಾನದ ಸಮೀಪದಲ್ಲಿ ರವಿಗೌಡ ಅವರ ಆಲೆಮನೆ ಕುಸಿದಿರುವುದು   

ಶ್ರವಣಬೆಳಗೊಳ: ಹೋಬಳಿಯ ಹಲವು ಭಾಗಗಳಲ್ಲಿ ಬುಧವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಅಪಾರ ಹಾನಿ ಉಂಟಾಗಿದೆ.

ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೆ ಮೈದಾನದ ಸಮೀಪದಲ್ಲಿ ರವಿಗೌಡ ಅವರಿಗೆ ಸೇರಿದ ಆಲೆಮನೆ ಚಾವಣಿ ಸಂಪೂರ್ಣ ನೆಲಕ್ಕುರುಳಿದೆ. ಬೆಲ್ಲ ಸೇರಿದಂತೆ ಸುಮಾರು ₹ 3 ಲಕ್ಷ ಮೌಲ್ಯದ ವಸ್ತುಗಳು ನಾಶವಾಗಿವೆ.ಮಲ್ಲೇನಹಳ್ಳಿ, ಅಂಕನಹಳ್ಳಿ, ಮದನೆ, ಬ್ಯಾಡರಹಳ್ಳಿ, ಇಂದ್ರನಹಳ್ಳಿ, ಇಂದ್ರನಹಳ್ಳಿ ಕೊಪ್ಪಲು ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿವೆ.

ಸುಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಭೇನಹಳ್ಳಿ ಗ್ರಾಮದಲ್ಲಿ ಎರಡು ಮನೆಗಳು ಬಿರುಗಾಳಿಗೆ ಭಾಗಶಃ ಜಖಂಗೊಂಡಿವೆ ಎಂದು ಕಂದಾಯ ನಿರೀಕ್ಷಕ ಮೋಹನ್‌ಕುಮಾರ್ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.