ಹಾವೇರಿ: ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕು ಬೀಜಗುಪ್ಪಿ ಗ್ರಾಮದಲ್ಲಿ ಬಸವೇಶ್ವರ ಮೂರ್ತಿಯನ್ನು ಭಗ್ನಗೊಳಿಸಿದ್ದನ್ನು ಖಂಡಿಸಿ ಹಾವೇರಿ ಜಿಲ್ಲಾ ಬಸವ ಬಳಗ, ಹಾವೇರಿ ಜಿಲ್ಲಾ ಚಲವಾದಿ ಮಹಾಸಭಾ, ಜಾಗೃತಿ ಲಿಂಗಾಯತ ಮಹಾಸಭಾ ಶಾಖೆ, ಬಸವದಳ ಹಾವೇರಿ, ಬಸವಕೇಂದ್ರ ಹಾವೇರಿ, ರಾಷ್ಟ್ರೀಯ ಬಸವದಳ ಹಾವೇರಿ, ಅಕ್ಕನ ಬಳಗ, ಕದಳಿ ವೇದಿಕೆಯ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.
ವಕೀಲರಾದ ಜಯದೇವ ಕೆರೂಡಿ ಮಾತನಾಡಿ, ‘ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕು ಬೀಜಗುಪ್ಪಿ ಗ್ರಾಮದಲ್ಲಿ ಬಸವೇಶ್ವರರ ಮೂರ್ತಿಯನ್ನು ಕಿಡಗೇಡಿಗಳು, ದುಷ್ಕರ್ಮಿಗಳು ಭಗ್ನಗೊಳಿಸಿರುತ್ತಾರೆ. ಈ ದುಷ್ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಹಾವೇರಿ ಜಿಲ್ಲಾ ಚಲವಾದಿ ಮಹಾಸಭಾದ ಅಧ್ಯಕ್ಷ ಶಂಭು ಕಳಸದ ಮಾತನಾಡಿ, ‘ಜ್ಯಾತ್ಯತೀತೆಯ ರಾಷ್ಟ್ರವಾದ ನಮ್ಮ ದೇಶದಲ್ಲಿ ಸಾಧು-ಸಂತರ, ಶರಣ-ಮಹಾತ್ಮರು ಹಾಗೂ ಸಾಧಕರ ಪ್ರತಿಮೆಗಳಿಗೆ ಅವಮಾನ ಎಸಗುತ್ತಿರುವ ಇಂತಹ ದುಷ್ಟರನ್ನು ಬಂಧಿಸಿ ಅವರ ವಿರುದ್ಧ ಕಾನೂನು ರೀತಿ ಶಿಕ್ಷಗೆ ಗುರಿಪಡಿಸಬೇಕು’ ಎಂದು ಒತ್ತಾಯಿಸಿದರು.
ಜಯಶ್ರೀ ಶಿವಪೂರ, ಶಿವಯೋಗಪ್ಪ ಬೆನ್ನೂರ, ಶಿವಬಸಪ್ಪ ಮುದ್ದಿ, ಮುರಿಗೆಪ್ಪ ಕಡೆಕೊಪ್ಪ, ಸಿ.ಎನ್. ರೊಡ್ಡನವರ, ಉಮೇಶ ಪಂಪಣ್ಣನವರ, ಜಗದೀಶ ಅಂಕಲಕೋಟಿ, ಸತೀಶ ಕಾಟೇನಹಳ್ಳಿ, ಸುರೇಶ ಚಲವಾದಿ, ಸಚಿನ ಕಾಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.