ADVERTISEMENT

ರಾಜ್ಯ ರಾಜಕಾರಣಕ್ಕೆ ಹಾವೇರಿ ಸಂಸದ ಶಿವಕುಮಾರ ಉದಾಸಿ

ಸುಳಿವು ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 16:23 IST
Last Updated 9 ಜೂನ್ 2021, 16:23 IST
ಶಿವಕುಮಾರ್ ಉದಾಸಿ
ಶಿವಕುಮಾರ್ ಉದಾಸಿ   

ಹಾವೇರಿ: ‘ತಂದೆಯ ಜಾಗವನ್ನು ಸಂಸದ ಶಿವಕುಮಾರ ಉದಾಸಿ ತುಂಬುತ್ತಾರೆ. ಅವರ ಸ್ಥಾನದಲ್ಲಿ ಪುತ್ರನೇ ನಿಲ್ಲುತ್ತಾರೆ. ತಂದೆಯವರ ಹಾದಿಯಲ್ಲಿ ನಡೆಯಲು ನಾವು ಮನವಿ ಮಾಡುತ್ತೇವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಮೂಲಕ, ರಾಜ್ಯ ರಾಜಕಾರಣಕ್ಕೆ ಶಿವಕುಮಾರ ಉದಾಸಿ ಬರುವುದನ್ನು ಪರೋಕ್ಷವಾಗಿ ತಿಳಿಸಿದರು.

ಹಾನಗಲ್‌ನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ತಂದೆಯವರ ಕೆಲಸಗಳನ್ನು ಪುತ್ರ ಮುಂದುವರಿಸಿಕೊಂಡು ಹೋಗಬೇಕು. ಉತ್ತರ ಕರ್ನಾಟಕಕ್ಕೆ ಉದಾಸಿ ಅವರ ಕೊಡುಗೆ ಅಪಾರವಾಗಿದೆ. ನಾನು ರಾಜಕೀಯಕ್ಕೆ ಬರಲು ಉದಾಸಿ ಅವರೇ ಕಾರಣ. ಅವರೇ ನನ್ನ ಗಾಡ್‌ಫಾದರ್‌’ ಎಂದು ಬೊಮ್ಮಾಯಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.