ADVERTISEMENT

ಅಹಿಂಸಾ ತತ್ವ ಸಾರಿದ ಜೈನಧರ್ಮ: ಬಸವರಾಜ ಬೊಮ್ಮಾಯಿ

ಯಾತ್ರಿ ನಿವಾಸ ಕಟ್ಟಡದ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 15:35 IST
Last Updated 14 ಮಾರ್ಚ್ 2023, 15:35 IST
ಶಿಗ್ಗಾವಿ ತಾಲ್ಲೂಕು ಅರಟಾಳ ಗ್ರಾಮದ ಶ್ರೀಕ್ಷೇತ್ರದಲ್ಲಿ ₹1.5 ಕೋಟಿ ವೆಚ್ಚದಲ್ಲಿ ಮಂಗಳವಾರ ನೂತನ ಯಾತ್ರಿ ನಿವಾಸ ಕಟ್ಟಡ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಯ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು 
ಶಿಗ್ಗಾವಿ ತಾಲ್ಲೂಕು ಅರಟಾಳ ಗ್ರಾಮದ ಶ್ರೀಕ್ಷೇತ್ರದಲ್ಲಿ ₹1.5 ಕೋಟಿ ವೆಚ್ಚದಲ್ಲಿ ಮಂಗಳವಾರ ನೂತನ ಯಾತ್ರಿ ನಿವಾಸ ಕಟ್ಟಡ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಯ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು    

ಅರಟಾಳ (ತಡಸ): ‘ಅಹಿಂಸೆ ಪರಮೋಧರ್ಮ ಎಂಬುವ ಜೈನ ಧರ್ಮದ ತತ್ವವನ್ನು ಪಾಲಿಸಿದ್ದರೆ, ಜಗತ್ತಿನಲ್ಲಿ ಹಿಂಸೆ ಎಂಬುವುದು ಇರುತ್ತಿರಲಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಶಿಗ್ಗಾವಿ ತಾಲ್ಲೂಕು ಅರಟಾಳ ಗ್ರಾಮದ ಶ್ರೀಕ್ಷೇತ್ರದಲ್ಲಿ ₹1.5 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳವಾರ ನೂತನ ಯಾತ್ರಿ ನಿವಾಸ ಕಟ್ಟಡ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಜೈನ ಧರ್ಮೀಯರು ತಾವು ದುಡಿಯುವ ಸಂಪತ್ತಿನ ಒಂದು ಭಾಗವನ್ನು ಧರ್ಮದ ಕಾರ್ಯಕ್ಕೆ ಮೀಸಲಿಡುತ್ತಾರೆ. ಮುಂದಿನ ಜನಾಂಗಕ್ಕೆ ಈ ಧರ್ಮದ ಪರಿಚಯವಾಗಬೇಕೆಂದು ಕ್ಷೇತ್ರದ ಎಲ್ಲ ಬಸದಿಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಬರುವ ಫೆಬ್ರವರಿ ತಿಂಗಳ ಒಳಗಾಗಿ ಕಟ್ಟಡವನ್ನು ಪೂರ್ಣಗೊಳಿಸಿ ಶ್ರೀಗಳಿಗೆ ಒಪ್ಪಿಸಲಾಗುತ್ತದೆ ಎಂದರು.

ADVERTISEMENT

ಸಾನ್ನಿಧ್ಯವಹಿಸಿದ್ದ ಅಭಿಷ್ಠಾನ ಮುನಿಶ್ರೀ 108 ಪುಣ್ಯ ಸಾಗರ ಮಹಾರಾಜರು, ಹಿಂಸೆಯನ್ನು ಮಾಡುವುದು ಮಾನವ ಜನ್ಮದ ಅತಿ ದುರಂತದ ಕಾರ್ಯವಾಗಿದ್ದು, ಸಕಲ ಜೀವಿಗಳಿಗೂ ಬದುಕಲು ಮಾನವನ ಸಹಕಾರ ಮುಖ್ಯವಾಗಿದೆ. ಸುಂದರ ತಾಣವಾಗಿ ಅರಟಾಳ ಗ್ರಾಮವನ್ನಾಗಿ ಮಾಡುವುದರ ಜೊತೆಗೆ ಜೈನ ಸಮುದಾಯದ ಐತಿಹಾಸಿಕ ಬಿತ್ತರಿಸುವ ತಾಣವನ್ನು ಸಂರಕ್ಷಣೆ ಮಾಡುವ ಕಾರ್ಯ ನಾಡಿನ ಮುಖ್ಯಮಂತ್ರಿ ಮಾಡಿದ್ದಾರೆ ಎಂದರು.

ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಕುಮಾರ ಮಹಾಸ್ವಾಮಿ ಧುಂಡಶಿ, ವಾ.ಕ.ರ.ಸಾ. ಸಂಸ್ಥೆ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಜೈನ ಸಮುದಾಯದ ಹಿರಿಯ ಮುಖಂಡ ದತ್ತಾ ಡೋರ್ಲೆ, ತವನಪ್ಪ ಅಷ್ಟಗಿ, ಇರಣ್ಣ ಚೌಟಿ, ರವಿ ಪಾಸಾರಾ, ಗ್ರಾಮ ಪಂಚಾಯತ ಅಧ್ಯಕ್ಷ ಅಣ್ಣಪ್ಪ ಲಮಾಣಿ, ಅಜಿತ ಬಸಾಪುರ, ದೇವಣ್ಣ ಚಾಕಲಬ್ಬಿ, ಕಿರಣ ಅವರಾದಿ, ಮಹಾವೀರ ಕೊಳುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.