ADVERTISEMENT

ಹಾವು ಕಚ್ಚಿ ಹಸುಗಳ ಸಾವು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 14:57 IST
Last Updated 11 ಸೆಪ್ಟೆಂಬರ್ 2020, 14:57 IST
ಕುಮಾರಪಟ್ಟಣ ಸಮೀಪದ ಕರೂರು ಗ್ರಾಮದಲ್ಲಿ ಗುರುವಾರ ರಾತ್ರಿ ರಿಯಾಜ್ ಮಹಬೂಬಸಾಬ್ ಗವೆನವರ ಅವರಿಗೆ ಸೇರಿದ ಎರಡು ಹಸುಗಳು ಹಾವು ಕಚ್ಚಿದ್ದರಿಂದ ಮೃತಪಟ್ಟಿವೆ
ಕುಮಾರಪಟ್ಟಣ ಸಮೀಪದ ಕರೂರು ಗ್ರಾಮದಲ್ಲಿ ಗುರುವಾರ ರಾತ್ರಿ ರಿಯಾಜ್ ಮಹಬೂಬಸಾಬ್ ಗವೆನವರ ಅವರಿಗೆ ಸೇರಿದ ಎರಡು ಹಸುಗಳು ಹಾವು ಕಚ್ಚಿದ್ದರಿಂದ ಮೃತಪಟ್ಟಿವೆ   

ಕುಮಾರಪಟ್ಟಣ: ಸಮೀಪದ ಕರೂರು ಗ್ರಾಮದ ರೈತ ರಿಯಾಜ್ ಮಹಬೂಬಸಾಬ್ ಗವೆನವರ ಅವರು ವ್ಯವಸಾಯಕ್ಕೆಂದು ಸಾಕಿದ್ದ ಎರಡು ಹಸುಗಳು ಗುರುವಾರ ರಾತ್ರಿ ಹಾವು ಕಚ್ಚಿದ್ದರಿಂದ ಮೃತಪಟ್ಟಿವೆ.

ರೈತ ರಿಯಾಜ್ ಮಾತನಾಡಿ, ಬೇಸಾಯಕ್ಕಾಗಿ 90 ಸಾವಿರ ಕೊಟ್ಟು ಖರೀದಿ ಮಾಡಲಾಗಿತ್ತು. ಇದರಿಂದ ನನ್ನ ಕೈ ಕಟ್ಟಿ ಹಾಕಿದಂತಾಗಿದೆ ಎಂದು ತನ್ನ ಅಳಲು ತೋಡಿಕೊಂಡರು.

ಈ ಕುರಿತು ಕುಮಾರಪಟ್ಟಣ ಠಾಣೆ ಎಎಸ್ಐ ಸಿ.ಡಿ.ನಡುವಿನಮನಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ. ಮಂಜುನಾಥ ಗಂಗಮಾಳಮ್ಮನವರ, ಗ್ರಾಮ ಲೆಕ್ಕಾಧಿಕಾರಿ ಬಸವಂತಕುಮಾರ್ ಭೇಟಿ ನೀಡಿದರು. ಗ್ರಾಮದ ಮುಖಂಡರಾದ ಪ್ರಕಾಶ್ ಹೊರಕೇರಿ, ಪಕ್ಕಿರೇಶ್ ಕೊಲಾಟಿ, ರೈತ ಮುಖಂಡ ಬಸವಂತಪ್ಪ ಅಜ್ಜನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.