ADVERTISEMENT

ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 14:53 IST
Last Updated 22 ಏಪ್ರಿಲ್ 2021, 14:53 IST
ಚಲಿಸುತ್ತಿದ್ದ ಬಸ್ ಇಳಿಯಲು ಹೋಗಿ ಮೃತಪಟ್ಟ ಸುಮಿತ್ರಾ ಎಂ.ಆರ್. ಅವರ ತಾಯಿ ಕಮಲಾಬಾಯಿ ಅವರಿಗೆ ₹2.75 ಲಕ್ಷ ಚೆಕ್‍ ಅನ್ನು ಗುರುವಾರ ಹಾವೇರಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್. ಜಗದೀಶ ವಿತರಿಸಿದರು
ಚಲಿಸುತ್ತಿದ್ದ ಬಸ್ ಇಳಿಯಲು ಹೋಗಿ ಮೃತಪಟ್ಟ ಸುಮಿತ್ರಾ ಎಂ.ಆರ್. ಅವರ ತಾಯಿ ಕಮಲಾಬಾಯಿ ಅವರಿಗೆ ₹2.75 ಲಕ್ಷ ಚೆಕ್‍ ಅನ್ನು ಗುರುವಾರ ಹಾವೇರಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್. ಜಗದೀಶ ವಿತರಿಸಿದರು   

ಹಾವೇರಿ: ಚಲಿಸುತ್ತಿದ್ದ ಬಸ್ ಇಳಿಯಲು ಹೋಗಿ ಮೃತಪಟ್ಟ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಮಾನಂಗಿ ತಾಂಡಾದ ಸುಮಿತ್ರಾ ಎಂ.ಆರ್. ಅವರ ತಾಯಿ ಕಮಲಾಬಾಯಿ ಅವರಿಗೆ ₹2.75 ಲಕ್ಷ ಚೆಕ್‍ ಅನ್ನು ಗುರುವಾರ ಹಾವೇರಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್. ಜಗದೀಶ ವಿತರಿಸಿದರು.

ವಾ.ಕ.ರ.ಸಾರಿಗೆ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ಮೃತಪಟ್ಟರೆ ₹3 ಲಕ್ಷ ಪರಿಹಾರ ಮೊತ್ತ ನೀಡುವ ನಿರ್ದೇಶನವಿದ್ದು, 2020ರ ಡಿ.4ರಂದು ಅಪಘಾತ ನಡೆದ ದಿನವೇ ಮಧ್ಯಂತರ ಪರಿಹಾರವೆಂದು ₹25 ಸಾವಿರವನ್ನು ಮೃತರ ವಾರಸುದಾರರಿಗೆ ನೀಡಲಾಗಿತ್ತು.

ಚೆಕ್ ವಿತರಣೆ ಸಂದರ್ಭದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿ ಅಶೋಕ ಆರ್. ಪಾಟೀಲ, ಉಪಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಜಗದೀಶ್ ವಿ.ಎಚ್. ಹಾಗೂ ಸಹಾಯಕ ಲೆಕ್ಕ ಪತ್ರ ಅಧಿಕಾರಿ (ಪ್ರ) ಎನ್.ಬಿ. ದೊರಳ್ಳಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.