ADVERTISEMENT

ವಿದ್ಯುತ್‌ ಸ್ಪರ್ಶ: 150 ಕ್ವಿಂಟಲ್‌ ಮೆಕ್ಕೆಜೋಳ ಹಾನಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 14:17 IST
Last Updated 21 ನವೆಂಬರ್ 2020, 14:17 IST
ಹಾವೇರಿ ತಾಲ್ಲೂಕು ನಾಗನೂರು ಗ್ರಾಮದಲ್ಲಿ ವಿದ್ಯುತ್‌ ಸ್ಪರ್ಶದಿಂದ ಸುಟ್ಟು ಕರಕಲಾಗಿರುವ ಮೆಕ್ಕೆಜೋಳ
ಹಾವೇರಿ ತಾಲ್ಲೂಕು ನಾಗನೂರು ಗ್ರಾಮದಲ್ಲಿ ವಿದ್ಯುತ್‌ ಸ್ಪರ್ಶದಿಂದ ಸುಟ್ಟು ಕರಕಲಾಗಿರುವ ಮೆಕ್ಕೆಜೋಳ   

ಹಾವೇರಿ: ತಾಲ್ಲೂಕಿನ ನಾಗನೂರ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಹೊಲದಲ್ಲಿ ಗುಡ್ಡೆ ಹಾಕಿದ್ದ 150 ಕ್ವಿಂಟಲ್‌ ಮೆಕ್ಕೆಜೋಳ ಫಸಲು ಶನಿವಾರ ಸುಟ್ಟು ಕರಕಲಾಗಿದೆ.

‘8 ಎಕರೆ 23 ಗುಂಟೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಕಟಾವು ಮಾಡಿದ ನಂತರ ಹೊಲದಲ್ಲೇ ಒಣಗಿ ಹಾಕಿದ್ದೆವು. ಹೊಲದಲ್ಲಿ ಹಾದು ಹೋಗಿರುವ ವಿದ್ಯುತ್‌ ಕಂಬದಿಂದ ವಿದ್ಯುತ್‌ ಸ್ಪರ್ಶವಾಗಿ ಶೇ 90ರಷ್ಟು ಮೆಕ್ಕೆಜೋಳ ಸುಟ್ಟು ಕರಕಲಾಗಿದೆ. ಅಂದಾಜು ₹2 ಲಕ್ಷ ನಷ್ಟವಾಗಿದೆ’ ಎಂದುಗ್ರಾಮದ ರುದ್ರಪ್ಪ ಓಂಕಾರಣ್ಣ ಅಳಲು ತೋಡಿಕೊಂಡರು.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದರು. ಇದರಿಂದ ಪಕ್ಕದಲ್ಲಿದ್ದ ಕಬ್ಬಿನ ಹೊಲಗಳಿಗೆ ಬೆಂಕಿ ಹರಡುವುದು ತಪ್ಪಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.