ಹಾವೇರಿ: ಜಿಲ್ಲೆಯಾದ್ಯಂತ ಬುಧವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ನಿರಂತರವಾಗಿ ತುಂತುರು ಮಳೆಯಾಗುತ್ತಿದ್ದು, ಒಟ್ಟು 35 ಮನೆಗಳಿಗೆ ಹಾನಿಯಾಗಿದೆ.
ಶಿಗ್ಗಾವಿ ತಾಲ್ಲೂಕಿನಲ್ಲಿ 12, ಸವಣೂರು ತಾಲ್ಲೂಕಿನಲ್ಲಿ 16, ಹಾನಗಲ್ ತಾಲ್ಲೂಕಿನಲ್ಲಿ 6, ಹಿರೇಕೆರೂರಿನಲ್ಲಿ 1 ಸೇರಿದಂತೆ ಒಟ್ಟು 35 ಮನೆಗಳು ಶಿಥಿಲಗೊಂಡಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಕಬ್ಬು ಬೆಳೆ ಹಾನಿ: ನೆಗಳೂರ ಗ್ರಾಮದ ರೈತ ನಾಗರಾಜ ಕರಬಸಪ್ಪ ಸನಾದಿ ಅವರ ಆರು ಎಕರೆ ಹೊಲದಲ್ಲಿ ಹುಲುಸಾಗಿ ಬೆಳೆದಿದ್ದ ಕಬ್ಬು ಗಾಳಿ ಹಾಗೂ ಭಾರಿ ಮಳೆಯಿಂದ ಧರೆಗುರುಳಿದೆ.
ಮಳೆ ವಿವರ: ಹಾವೇರಿ–25 ಮಿ.ಮೀ, ರಾಣೆಬೆನ್ನೂರು–19.4 ಮಿ.ಮೀ., ಬ್ಯಾಡಗಿ–20.4 ಮಿ.ಮೀ, ಹಿರೇಕೆರೂರ–41.6 ಮಿ.ಮೀ, ಸವಣೂರ–32.7 ಮಿ.ಮೀ, ಶಿಗ್ಗಾವಿ–43.2 ಮಿ.ಮೀ ಹಾಗೂ ಹಾನಗಲ್ 33 ಮಿ.ಮೀಟರ್ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.