ADVERTISEMENT

‘ಹಾವೇರಿಯಾಂವ್‌’ ಕೃತಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 15:31 IST
Last Updated 6 ಡಿಸೆಂಬರ್ 2021, 15:31 IST
ಮಾಲತೇಶ ಅಂಗೂರ 
ಮಾಲತೇಶ ಅಂಗೂರ    

ಹಾವೇರಿ: ನಗರದ ಪತ್ರಕರ್ತ, ಸಾಹಿತಿ ಮಾಲತೇಶ ಅಂಗೂರ ಅವರ ಅಂಕಣಬರಹಗಳ ‘ಹಾವೇರಿಯಾಂವ್’ ಕೃತಿ ‘ಎನ್.ಎಸ್. ವಾಮನ್ ಶತಮಾನೋತ್ಸವ ಪುಸ್ತಕ ಪ್ರಶಸ್ತಿಗೆ’ ಆಯ್ಕೆಯಾಗಿದೆ.

ಬಾನುಲಿ ಹಾಗೂ ರಂಗಭೂಮಿಗಳ ನಟ ಹಾಗೂ ನಿರ್ದೇಶಕ ಎನ್.ಎಸ್. ವಾಮನ್ ಅವರ ಶತಮಾನೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ‘ಅಭಿರುಚಿ ಬಳಗ’ ಹಾಗೂ ‘ಆಸಕ್ತಿ ಪ್ರಕಾಶನ’ ‘ಎನ್.ಎಸ್.ವಾಮನ್ ಶತಮಾನೋತ್ಸವ ಪುಸ್ತಕ ಪ್ರಶಸ್ತಿ’ಗೆ ಕೃತಿಗಳನ್ನು ಆಹ್ವಾನಿಸಿತ್ತು.

ರಾಜ್ಯದ ವಿವಿಧ ಲೇಖಕರ 46 ಕೃತಿಗಳುಪ್ರಶಸ್ತಿಗೆ ಬಂದಿದ್ದವು. ಅವುಗಳಲ್ಲಿ ‘ಹಾವೇರಿಯಾಂವ್’ ಕೃತಿಗೆ ಮೂರನೇ ಬಹುಮಾನ ಲಭಿಸಿದೆ. 2022ರ ಜನವರಿ 2ರಂದು ಮೈಸೂರಿನಲ್ಲಿ ಪುಸ್ತಕ ಪ್ರಶಸ್ತಿ ಪದಾನ ಮಾಡಲಾಗುವುದು ಎಂದು ಅಭಿರುಚಿ ಪ್ರಕಾಶನದ ಎನ್.ವಿ.ರಮೇಶ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.