ADVERTISEMENT

ಕುರಿಗಾರರ ನೆರವಿಗೆ ₹3.63 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 15:17 IST
Last Updated 26 ಜುಲೈ 2021, 15:17 IST
ಹಾವೇರಿ ನಗರದ ಪಶು ಆಸ್ಪತ್ರೆಯಲ್ಲಿ ಕುರಿಗಾರರಿಗೆ ಸತ್ತ ಕುರಿಗಳ ಪರಿಹಾರಧನವನ್ನು ಶಾಸಕ ನೆಹರು ಓಲೇಕಾರ ವಿತರಿಸಿದರು 
ಹಾವೇರಿ ನಗರದ ಪಶು ಆಸ್ಪತ್ರೆಯಲ್ಲಿ ಕುರಿಗಾರರಿಗೆ ಸತ್ತ ಕುರಿಗಳ ಪರಿಹಾರಧನವನ್ನು ಶಾಸಕ ನೆಹರು ಓಲೇಕಾರ ವಿತರಿಸಿದರು    

ಹಾವೇರಿ: ಕೊರೊನಾ ಸಂಕಷ್ಟ ಕಾಲದಲ್ಲಿ ಕುರಿಗಾರರ ನೆರವಿಗೆ ಸರ್ಕಾರ ಜಿಲ್ಲೆಗೆ ₹3.63 ಕೋಟಿ ಬಿಡುಗಡೆ ಮಾಡಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

‌ನಗರದ ಪಶು ಆಸ್ಪತ್ರೆಯಲ್ಲಿ ಇತ್ತೀಚೆಗೆ ಹಾವೇರಿ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುರಿಗಾರರಿಗೆ 2018-19 ಮತ್ತು 2019-20ನೇ ಸಾಲಿನ ಸತ್ತ ಕುರಿಗಳ ಪರಿಹಾರಧನ ವಿತರಿಸಿ ಅವರು ಮಾತನಾಡಿದರು.

ಸರ್ಕಾರ ರೈತರು ಹಾಗೂ ಕುರಿಗಾರರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಜಿಲ್ಲೆಯ ಪರಿಶಿಷ್ಟ ಜಾತಿ ಕುರಿಗಾರರಿಗೆ ₹17.75 ಲಕ್ಷ, ಪರಿಶಿಷ್ಟ ಪಂಗಡದವರಿಗೆ ₹13.77 ಹಾಗೂ ಸಾಮಾನ್ಯ ವರ್ಗದವರಿಗೆ ₹3.32 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಪರಿಹಾರಧನವನ್ನು ಆರ್.ಟಿ.ಜಿ.ಎಸ್. ಮೂಲಕ ಸಂದಾಯ ಮಾಡಲಾಗುವುದು. ಜಿಲ್ಲೆಯಲ್ಲಿ ಜಾನುವಾರುಗಳಿಗೆ, ಕುರಿ ಮತ್ತು ಮೇಕೆಗಳ ಚಿಕಿತ್ಸೆಗೆ ಹಾವೇರಿ ನಗರದಲ್ಲಿ ಆತ್ಯಾಧುನಿಕ ಆಸ್ಪತ್ರೆ (ಪಾಲಿಕ್ಲಿನಿಕ್) ಸ್ಥಾಪಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ADVERTISEMENT

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಚ್.ಸಿ.ಪಾಟೀಲ, ಸಹಾಯಕ ನಿರ್ದೇಶಕ ಡಾ.ಪರಮೇಶ ಎನ್.ಹುಬ್ಬಳ್ಳಿ, ನಗರಸಭೆ ಸದಸ್ಯ ಶಿವರಾಜ ಮತ್ತಿಹಳ್ಳಿ, ತಹಶೀಲ್ದಾರ್‌ ಗಿರೀಶ ಸ್ವಾದಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ.ಸಿ.ಬಸವರಾಜ, ಜಾನುವಾರು ಅಭಿವೃದ್ಧಿ ಅಧಿಕಾರಿ ಎಸ್.ಎಫ್. ಕರಿಯಲ್ಲಪ್ಪನವರ, ಅಶೋಕ ತಳವಾರ, ಶ್ರೀಕಾಂತ ಪೂಜಾರ, ಕೆ.ಸಿ.ಕೋರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.