ADVERTISEMENT

ಸತ್ಕಾರ್ಯದಿಂದ ಜೀವನ ಸಾರ್ಥಕ: ಸದಾಶಿವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 15:28 IST
Last Updated 1 ನವೆಂಬರ್ 2021, 15:28 IST
ಹಾವೇರಿ ನಗರದ ಶಿವಯೋಗೀಶ್ವರ ನಗರದ ಮುರಿಗೆಪ್ಪ ಕಡೇಕೊಪ್ಪ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು. ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಇದ್ದಾರೆ 
ಹಾವೇರಿ ನಗರದ ಶಿವಯೋಗೀಶ್ವರ ನಗರದ ಮುರಿಗೆಪ್ಪ ಕಡೇಕೊಪ್ಪ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು. ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಇದ್ದಾರೆ    

ಹಾವೇರಿ: ಮನುಷ್ಯ ಸಂಘ ಜೀವಿಯಾಗಿರುವುದರಿಂದ ಜೀವಿತಾವಧಿಯಲ್ಲಿ ಸತ್ಕಾರ್ಯಗಳನ್ನು ಮಾಡಿದರೆ, ಜೀವನ ಸಾರ್ಥಕವಾಗುತ್ತದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ನಗರದ ಶಿವಯೋಗೀಶ್ವರ ನಗರದ ಮುರಿಗೆಪ್ಪ ಕಡೇಕೊಪ್ಪ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ, ದಯೆ, ಧರ್ಮ, ದಾಸೋಹ ಇವುಗಳು ಶರಣರ ತತ್ವಗಳಲ್ಲಿ ಅಡಕಗೊಂಡಿದ್ದು, ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಚರಿಸುವುದು ಸಾರ್ಥಕ ಜೀವನದ ಲಕ್ಷಣವಾಗಿದೆ ಎಂದರು.

ADVERTISEMENT

ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಮನುಷ್ಯ ಹುಟ್ಟಿದಾಗ ಹೆಸರು ಇರುವುದಿಲ್ಲ. ಸಾವಾದಾಗ ಉಸಿರು ಇರುವುದಿಲ್ಲ. ಹುಟ್ಟು ಸಾವಿನ ಮಧ್ಯೆ ಮನುಷ್ಯ ಸದಾಚಾರದಲ್ಲಿ ತೊಡಗಿ ಸಮಾಜಮುಖಿಯಾಗಿ ಬದುಕಿದರೆ, ಜೀವನ ಅರ್ಥಪೂರ್ಣವೆನಿಸುತ್ತದೆ ಎಂದರು.

ಶಿವಬಸಪ್ಪ ಮುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನಬಸವ ರೊಡ್ಡನವರ ನಿರೂಪಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ವಂದಿಸಿದರು. ಮುರಿಗೆಪ್ಪ ಕಡೇಕೊಪ್ಪ, ಶಿವಯೋಗಿ ಬೆನ್ನೂರ, ಉಳಿವೆಪ್ಪ ಪಂಪಣ್ಣವರ, ನಾಗೇಂದ್ರ ಕಟಕೋಳ, ಎಸ್. ಎಸ್ ಬೇವಿನಮರದ, ಇಂದೂಧರ ಯರೇಸಿಮಿ, ಕೆ.ಎಂ ವಿಜಾಪೂರ, ರಾಜು ಕಡೇಕೊಪ್ಪ, ಬಸವರಾಜ ಕಡೇಕೊಪ್ಪ, ಶಿವಯೋಗಿ ಸಣ್ಣಂಗಿ, ಹಾವೇರಿ ಬಸವಬಳಗದ ಸದಸ್ಯರು ಕಡೇಕೊಪ್ಪ, ಶಿರೂರು, ಕಬ್ಬೂರ ಬಂಧುಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.