ADVERTISEMENT

ಓದು, ಬರಹ, ಭಾಷಣಕ್ಕೆ ರಹದಾರಿಯಾಗಿದ್ದ ಈಶ್ವರಯ್ಯ ಮಠ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 15:17 IST
Last Updated 4 ಸೆಪ್ಟೆಂಬರ್ 2020, 15:17 IST
ಶ್ರದ್ಧಾಂಜಲಿ ಸಭೆಯಲ್ಲಿ ಪ್ರೊ. ಕೆ. ವಿಶ್ವನಾಥ, ಡಾ. ಕಲ್ಯಾಣರಾವ ಜಿ.ಪಾಟೀಲ, ವೈದ್ಯ ಸಾಹಿತಿ ಡಾ. ಎಸ್.ಎಸ್. ಗುಬ್ಬಿ,  ಶಿವರಂಜನ್ ಸತ್ಯಂಪೇಟೆ ಇತರರು ಇದ್ದರು
ಶ್ರದ್ಧಾಂಜಲಿ ಸಭೆಯಲ್ಲಿ ಪ್ರೊ. ಕೆ. ವಿಶ್ವನಾಥ, ಡಾ. ಕಲ್ಯಾಣರಾವ ಜಿ.ಪಾಟೀಲ, ವೈದ್ಯ ಸಾಹಿತಿ ಡಾ. ಎಸ್.ಎಸ್. ಗುಬ್ಬಿ,  ಶಿವರಂಜನ್ ಸತ್ಯಂಪೇಟೆ ಇತರರು ಇದ್ದರು   

ಕಲಬುರ್ಗಿ: ‘ಸಾಹಿತಿ ಬಿ. ಮಹಾದೇವಪ್ಪ ಹಾಗೂ ಪ್ರೊ. ಶಿವಶರಣ ಪಾಟೀಲ ಜಾವಳಿ, ಪ್ರೊ. ಕೆ. ವಿಶ್ವನಾಥ ಅವರ ಗರಡಿಯಲ್ಲಿ ಪಳಗಿದ ಡಾ. ಈಶ್ವರಯ್ಯ ಮಠ ಅವರು ತಮ್ಮೂರಿನ ಸಾಂಸ್ಕೃತಿಕ ಪರಿಸರದ ಹಿನ್ನೆಲೆಯಿಂದ ಬೆಳೆದು ಬಂದವರು’ ಎಂದು ಸರ್ಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಕಲ್ಯಾಣರಾವ ಜಿ.ಪಾಟೀಲ ಅಭಿಪ್ರಾಯಪಟ್ಟರು.

ಸಂಸ್ಕಾರ ಪ್ರತಿಷ್ಠಾನ, ಕಲಬುರ್ಗಿ ಆರ್ಟ್ ಥಿಯೇಟರ್, ಪ್ರಗತಿ ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕಲಾ ಶುಕ್ರವಾರ ಸಂಜೆ ಆಯೋಜಿಸಿದ್ದ ಡಾ. ಈಶ್ವರಯ್ಯ ಮಠ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಡಾ. ಮಠ ಅವರ ಬದುಕು ಬರಹ ಕುರಿತು ಅವರು ಮಾತನಾಡಿದರು.

‘ಸಕಾರಾತ್ಮಕ ಭಾವನೆ ಬೆಳೆಸಿಕೊಂಡಿದ್ದ ಅವರು ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನು ಉಂಡು ಅದನ್ನು ಮೆಟ್ಟಿ ನಿಂತು ಎತ್ತರಕ್ಕೆ ಬೆಳೆದವರು. ಅಪಾರ ಪುಸ್ತಕ ಪ್ರೀತಿ ಬೆಳೆಸಿಕೊಂಡಿದ್ದ ಅವರು ಅನೇಕರಿಗೆ ಆಪತ್ಭಾಂಧವರಾಗಿದ್ದರು’ ಎಂದರು.

ಪತ್ರಕರ್ತ, ಲೇಖಕ ಶಿವರಂಜನ್ ಸತ್ಯಂಪೇಟೆ, ‘ಸಂಪ್ರದಾಯ ಕುಟುಂಬದಲ್ಲಿ ಹುಟ್ಟಿದ್ದರೂ ಅವುಗಳನ್ನು ಆಚರಿಸದೆ ಅಪ್ಪಟ ವೈಚಾರವಾದಿಗಳಾಗಿದ್ದರು. ಅಸ್ಪೃಶ್ಯತೆ, ಜಾತಿ ಪದ್ಧತಿ ತೊಲಗಿಸುವಲ್ಲಿ ಸಾಕಷ್ಟು ದುಡಿದಿದ್ದಾರೆ. ಸದಾ ಓದು, ಬರಹ ಹಾಗೂ ಸಾಂಘಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದರು. ಪ್ರೀತಿ, ಮಮತೆ, ತಾಳ್ಮೆ, ಕಾಳಜಿ, ಕಕ್ಕುಲಾತಿ, ಗೌರವ, ಸಹಾಯ, ಸಹಕಾರದ ಗುಣಗಳು ಇವರ ಅಂತರಂಗದಲ್ಲಿ ಅಡಗಿದ್ದವು ಎಂದು ವಿವರಿಸಿದರು.

ADVERTISEMENT

ನಿವೃತ್ತ ಪ್ರಾಚಾರ್ಯ ಪ್ರೊ. ಕೆ. ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಸಾಹಿತಿ ಡಾ. ಎಸ್.ಎಸ್. ಗುಬ್ಬಿ ಉಪಸ್ಥಿತರಿದ್ದರು.

ಕಪಿಲ್ ದೇವ ನಿರೂಪಿಸಿದರು. ಅಲ್ಲಮಪ್ರಭು ನಿಂಬರ್ಗಾ, ಸುನಿಲ ಮಾನಪಡೆ, ವಿಠ್ಠಲ್ ಚುಕಣಿ ವೇದಿಕೆಯಲ್ಲಿದ್ದರು. ಪಿ.ಎಂ.ಮಣ್ಣೂರ, ಸಿದ್ಧರಾಮ ಹೊನ್ಕಲ್, ಮಲ್ಲಿಕಾರ್ಜುನ ಮಠ, ಡಾ. ಸೂರ್ಯಕಾಂತ ಪಾಟೀಲ, ಪ.ಮಾನು ಸಗರ, ಡಾ. ದೇವಿದಾಸ ಮಾಲೆ, ಗುರುಬಸಪ್ಪ ಪಾಟೀಲ, ಗುರುಪಾದೇಶ್ವರ ಪಾಟೀಲ, ನರಸಿಂಗರಾವ ಹೆಮನೂರ, ರುಕ್ಮಿಣಿ ನಾಗಣ್ಣನವರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.