ಕಲಬುರ್ಗಿ: ‘ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಜೈಲು ಊಟ ಮಾಡಿ ಬಂದಿದ್ದಾರೆ. ನಾಲ್ಕು ಜನ ಸಚಿವರು ಊಟಕ್ಕೆ ಸಾಥ್ ಕೊಟ್ಟಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ಕಾಳಗಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ದೊಡ್ಡ ಮೊತ್ತದ ನೋಟುಗಳನ್ನು ನಿಷೇಧಿಸಿದ ಮೋದಿ ಎಲ್ಲರ ಜೇಬಲ್ಲಿರುವ ದುಡ್ಡನ್ನು ಬ್ಯಾಂಕಿಗೆ ಜಮೆ ಮಾಡಿಸಿದರು. ನೀರವ್ ಮೋದಿ, ಲಲಿತ್ ಮೋದಿ, ವಿಜಯ ಮಲ್ಯ ಅವರು ಆ ಹಣವನ್ನು ತೆಗೆದುಕೊಂಡು ಒಬ್ಬರ ನಂತರ ಒಬ್ಬರು ಪರಾರಿಯಾದರು. ಈ ಬಗ್ಗೆ ಮೋದಿ ಬಾಯಿ ಬಿಡುವುದಿಲ್ಲ. ಆದರೆ ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ’ ಎಂದು ಛೇಡಿಸಿದರು.
‘ಈ ಚುನಾವಣೆಯು ಎರಡು ವಿಷಯಗಳ ಮಧ್ಯೆ ನಡೆಯುತ್ತಿದೆ. ಆರ್ಎಸ್ಎಸ್, ಬಿಜೆಪಿ ಮೋದಿ ಒಂದೆಡೆಯಾದರೆ ಕಾಂಗ್ರೆಸ್, ಸಿದ್ದರಾಮಯ್ಯ, ಖರ್ಗೆ ಅವರ ವಿಚಾರಧಾರೆಗಳು ಇನ್ನೊಂದೆಡೆ. ಆರ್ಎಸ್ಎಸ್ ಕರ್ನಾಟಕವನ್ನು ನಿಯಂತ್ರಿಸುತ್ತಿದೆ. ದೇಶದಾದ್ಯಂತ ಒಂದೇ ವಿಚಾರಧಾರೆ ಇರಬೇಕು ಎಂಬುದು ಆರ್ಎಸ್ಎಸ್ ನಡೆಯಾಗಿದೆ. ಬಸವಣ್ಣ ಇಡೀ ದೇಶಕ್ಕೆ ದಾರಿ ತೋರಿಸಿದ್ದಾನೆ, ನುಡಿದಂತೆ ನಡೆದಿದ್ದಾನೆ. ಆದರೆ ಮೋದಿ ನುಡಿದಂತೆ ನಡೆಯುತ್ತಿಲ್ಲ’ ಎಂದು ಟೀಕಿಸಿದರು.
‘ರಾಹುಲ್ ಗಾಂಧಿಗೆ ಮಾತನಾಡಲು ಬರುವುದಿಲ್ಲ ಎಂದು ಮೋದಿ ಹೇಳುತ್ತಾರೆ. ಪ್ರಧಾನಿಗೆ ಗೌರವ ಕೊಡಬೇಕು ಎಂಬ ಕಾರಣಕ್ಕೆ ನಾನು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ಆದರೆ ಅನ್ಯಾಯದ ವಿರುದ್ಧ ನಿರಂತರವಾಗಿ ದನಿ ಎತ್ತುತ್ತೇನೆ’ ಎಂದು ಹೇಳಿದರು.
ಸಂಸದ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ 165 ಭರವಸೆಗಳ ಪೈಕಿ 155 ಭರವಸೆಗಳನ್ನು ಈಡೇರಿಸಿದೆ. 371 (ಜೆ) ಜಾರಿಯಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ವೈದ್ಯಕೀಯ ಸೀಟುಗಳು ಹೆಚ್ಚು ಸಿಗುತ್ತಿವೆ. 30 ಸಾವಿರ ಜನರಿಗೆ ಉದ್ಯೋಗ ದೊರಕಿದೆ. ರೈತರ ₹8,700 ಕೋಟಿ ಸಾಲವನ್ನು ಮನ್ನಾ ಮಾಡಲಾಗಿದೆ. ಆದ್ದರಿಂದ ಅಭಿವೃದ್ಧಿ ನೋಡಿ ಮತ ಕೊಡಿ ಎಂದು ಕೇಳುತ್ತಿದ್ದೇವೆ’ ಎಂದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ, ಅಭ್ಯರ್ಥಿಗಳಾದ ಡಾ.ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ಡಾ.ಉಮೇಶ ಜಾಧವ್, ಡಾ.ಅಜಯಸಿಂಗ್, ಅಲ್ಲಮಪ್ರಭು ಪಾಟೀಲ, ಕನ್ನೀಜ್ ಫಾತಿಮಾ, ವಿಜಯಕುಮಾರ್ ಜಿ.ರಾಮಕೃಷ್ಣ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.
ಕುಡಿಯುವ ನೀರಿಗೆ ಪರದಾಟ
ಪ್ರಚಾರ ಸಭೆ 12ಗಂಟೆಗೆ ನಿಗದಿಯಾಗಿದ್ದರೂ ಜನರು 11ಗಂಟೆಗೆ ಬಂದು ಕುಳಿತಿದ್ದರು. ನೆತ್ತಿ ಸುಡುವ ಬಿಸಿಲಿನಿಂದ ಬಸವಳಿದ ಕಾರ್ಯಕರ್ತರು ಕುಡಿಯುವ ನೀರಿಗೆ ಪರದಾಡುವಂತಾಯಿತು. ಒಮ್ಮೆ ಒಳಗೆ ಬಂದರೆ ಹೊರಗೆ ಹೋಗುವಂತಿರಲಿಲ್ಲ.
ಕೈಬೀಸಿದ ಮಹಿಳೆಯರು
ಕಾರ್ಯಕ್ರಮ ನಿಗದಿಪಡಿಸಿದ್ದ ವೇದಿಕೆಯ ಪಕ್ಕದಲ್ಲೇ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಹೆಲಿಕಾಪ್ಟರ್ ಕೆಳಗೆ ಇಳಿಯುತ್ತಿದ್ದಂತೆಯೇ ಎದ್ದು ನಿಂತ ಲಂಬಾಣಿ ಮಹಿಳೆಯರು ರಾಹುಲ್ ಗಾಂಧಿಯತ್ತ ಕೈಬೀಸಿದರು. ಕೆಲವರು ಕುರ್ಚಿಯಲ್ಲಿ ನಿಂತು ಕೈಬೀಸಿದರು. ಹೆಲಿಕಾಪ್ಟರ್ ಕಂಡು ಖುಷಿಪಟ್ಟರು.
ಗಮನ ಸೆಳೆದ ವೇಷಧಾರಿಗಳು: ಖರ್ಗೆ ಮಾತನಾಡುತ್ತಿರುವ ವೇಳೆ ವೇದಿಕೆ ಸಮೀಪ ಬಂದ ವೇಷಧಾರಿಗಳನ್ನು ಪೊಲೀಸರು ತಡೆದರು. ಆಗ ನೆರೆದ ಜನರ ಚಿತ್ತ ಆ ಕಡೆ ತಿರುಗಿತು. ಕೆಲವರು ಕುರ್ಚಿ ಮೇಲೆ ನಿಂತು ನೋಡಿದರು. ಆಗ ಖರ್ಗೆ, ‘ಅವರು ಅಲ್ಲಿಯೇ ಇರಲಿ, ಅವರಿಗೆ ಏನೂ ಮಾಡಬೇಡಿ’ ಎಂದು ಪೊಲೀಸರಿಗೆ ಹೇಳಿದರು. ಶರಣಪ್ರಕಾಶ ಕೂಡ ‘ಅವರು ಇಲ್ಲೇ ಇರಲಿ’ ಎಂದು ಹೇಳಿದರು.
ಕುಡಿಯುವ ನೀರಿಗೆ ಪರದಾಟ: ಪ್ರಚಾರ ಸಭೆ 12ಗಂಟೆಗೆ ನಿಗದಿಯಾಗಿದ್ದರೂ ಜನರು 11ಗಂಟೆಗೆ ಬಂದು ಕುಳಿತಿದ್ದರು. ನೆತ್ತಿ ಸುಡುವ ಬಿಸಿಲಿನಿಂದ ಬಸವಳಿದ ಕಾರ್ಯಕರ್ತರು ಕುಡಿಯುವ ನೀರಿಗೆ ಪರದಾಡುವಂತಾಯಿತು. ಒಮ್ಮೆ ಒಳಗೆ ಬಂದರೆ ಹೊರಗೆ ಹೋಗುವಂತಿರಲಿಲ್ಲ.
ಗಮನ ಸೆಳೆದ ವೇಷಧಾರಿಗಳು
ಖರ್ಗೆ ಮಾತನಾಡುತ್ತಿರುವ ವೇಳೆ ವೇದಿಕೆ ಸಮೀಪ ಬಂದ ವೇಷಧಾರಿಗಳನ್ನು ಪೊಲೀಸರು ತಡೆದರು. ಆಗ ನೆರೆದ ಜನರ ಚಿತ್ತ ಆ ಕಡೆ ತಿರುಗಿತು. ಕೆಲವರು ಕುರ್ಚಿ ಮೇಲೆ ನಿಂತು ನೋಡಿದರು. ಆಗ ಖರ್ಗೆ, ‘ಅವರು ಅಲ್ಲಿಯೇ ಇರಲಿ, ಅವರಿಗೆ ಏನೂ ಮಾಡಬೇಡಿ’ ಎಂದು ಪೊಲೀಸರಿಗೆ ಹೇಳಿದರು. ಶರಣಪ್ರಕಾಶ ಕೂಡ ‘ಅವರು ಇಲ್ಲೇ ಇರಲಿ’ ಎಂದು ಹೇಳಿದರು.
**
ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ. ನಾಲ್ಕು ವರ್ಷಗಳಲ್ಲಿ ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆಂದು ಮತ ಹಾಕಬೇಕು ಎಂದು ಅವರನ್ನು ಪ್ರಶ್ನಿಸಿ
– ಮಲ್ಲಿಕಾರ್ಜುನ ಖರ್ಗೆ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.