ADVERTISEMENT

‘ರೈತ, ಸೈನಿಕ ದೇಶದ ಕಣ್ಣು’

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 11:28 IST
Last Updated 26 ಜನವರಿ 2018, 11:28 IST
ಕಲಬುರ್ಗಿ ತಾಲ್ಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ಈಚೆಗೆ ತೊಗರಿ ಖರೀದಿ ಕೇಂದ್ರವನ್ನು ಶಿವಾನಂದ ಸ್ವಾಮೀಜಿ ಚಾಲನೆ ನೀಡಿದರು
ಕಲಬುರ್ಗಿ ತಾಲ್ಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ಈಚೆಗೆ ತೊಗರಿ ಖರೀದಿ ಕೇಂದ್ರವನ್ನು ಶಿವಾನಂದ ಸ್ವಾಮೀಜಿ ಚಾಲನೆ ನೀಡಿದರು   

ಕಲಬುರ್ಗಿ: ‘ರೈತ ಮತ್ತು ಸೈನಿಕರು ದೇಶದ ಎರಡು ಕಣ್ಣುಗಳಿದ್ದಂತೆ’ ಎಂದು ಹಾಗರಗುಂಡಗಿ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ಈಚೆಗೆ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೈತ ಚೆನ್ನಾಗಿ ಬೆಳೆ ಬೆಳೆದರೆ ನಾವು, ನೀವೆಲ್ಲ ಆರೋಗ್ಯವಾಗಿರುತ್ತೇವೆ. ಗಡಿಯಲ್ಲಿ ಸೈನಿಕ ಇರುವುದರಿಂದ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ. ಅದಕ್ಕಾಗಿ ರೈತರನ್ನು ಮತ್ತು ಸೈನಿಕರನ್ನು ಗೌರವದಿಂದ ಕಾಣಬೇಕು’ ಎಂದರು.

ADVERTISEMENT

ಯುವ ಕಾಂಗ್ರೆಸ್ ಮುಖಂಡ ಶಿವಅಷ್ಠಗಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಷಣ್ಮುಖಪ್ಪ ಶಿಖರಬಂಡಿ ಮಾತನಾಡಿದರು. ಬಸವರಾಜ ಹೇರೂರ, ತುಳಜಪ್ಪ ಬಿರಾದಾರ, ಬಾಬುರಾಯ ವೈಜಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.