ADVERTISEMENT

ಸಿ.ಎಂ ಸ್ವಾಗತ ಕಮಾನಿನಲ್ಲಿ ಆರೋಪಿಗಳ ಚಿತ್ರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 18:43 IST
Last Updated 23 ಜನವರಿ 2023, 18:43 IST
ಕಲಬುರಗಿ ಜಿಲ್ಲೆಯ ದೇವಲ ಗಾಣಗಾಪುರದಲ್ಲಿ ಮುಖ್ಯಮಂತ್ರಿ ಭಾಗವಹಿಸುವ ಕಾರ್ಯಕ್ರಮಕ್ಕೆ ಆರೋಪಿಗಳಾದ ಮಹಾಂತೇಶ ಪಾಟೀಲ, ಆರ್.ಡಿ. ಪಾಟೀಲ ಚಿತ್ರವಿರುವ ಸ್ವಾಗತ ಕಮಾನು ಅಳವಡಿಸಿರುವುದು
ಕಲಬುರಗಿ ಜಿಲ್ಲೆಯ ದೇವಲ ಗಾಣಗಾಪುರದಲ್ಲಿ ಮುಖ್ಯಮಂತ್ರಿ ಭಾಗವಹಿಸುವ ಕಾರ್ಯಕ್ರಮಕ್ಕೆ ಆರೋಪಿಗಳಾದ ಮಹಾಂತೇಶ ಪಾಟೀಲ, ಆರ್.ಡಿ. ಪಾಟೀಲ ಚಿತ್ರವಿರುವ ಸ್ವಾಗತ ಕಮಾನು ಅಳವಡಿಸಿರುವುದು   

ಕಲಬುರಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನವರಿ 24ರಂದು ಭಾಗವಹಿಸುವ ದೇವಲ ಗಾಣಗಾಪುರದ ಕಾರ್ಯಕ್ರಮದ ಸ್ವಾಗತ ಕಮಾನಿನಲ್ಲಿ, ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿಗಳಾದ ಅಫಜಲಪುರ ತಾಲ್ಲೂಕಿನ ಆರ್.ಡಿ. ಪಾಟೀಲ ಮತ್ತು ಆತನ ಅಣ್ಣ ಮಹಾಂತೇಶ ಪಾಟೀಲ ಅವರ ಚಿತ್ರಗಳನ್ನು ಹಾಕಲಾಗಿದೆ.

ಕೋಲಿ ಸಮಾಜದ ಹಿರಿಯ ಧುರೀಣರಾಗಿದ್ದ ದಿ. ವಿಠ್ಠಲ ಹೇರೂರ ಅವರ ಕಂಚಿನ ಮೂರ್ತಿ ಅನಾವರಣ ಕಾರ್ಯಕ್ರಮ ದೇವಲ ಗಾಣಗಾಪುರದಲ್ಲಿ ನಡೆಯಲಿದೆ. ಮುಖ್ಯಮಂತ್ರಿ, ಸಚಿವರು, ಸಂಸದರು ಮತ್ತು ಶಾಸಕರು ಭಾಗವಹಿಸುವರು.

ದೇವಲ ಗಾಣಗಾಪುರ ಗ್ರಾಮವನ್ನು ಪ್ರವೇಶಿಸುವ ಕೆಲವೆಡೆ ಸ್ವಾಗತ ಕಮಾನು, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿರುವ ಆರ್.ಡಿ. ಪಾಟೀಲ ಸೂಚನೆ ಮೇರೆಗೆ ಈ ಸ್ವಾಗತ ಕಮಾನು ಅಳವಡಿಸಲಾಗಿದೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.