ADVERTISEMENT

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಏರಿಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 4:59 IST
Last Updated 3 ಆಗಸ್ಟ್ 2021, 4:59 IST
ಕಮಲಾಪುರದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಮಾತನಾಡಿದರು. ಇಒ ಡಾ.ಮಂಜುನಾ, ಆಡಳಿತಾಧಿಕಾರಿ ಮೆಹಮೂದ್ ಇದ್ದರು
ಕಮಲಾಪುರದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಮಾತನಾಡಿದರು. ಇಒ ಡಾ.ಮಂಜುನಾ, ಆಡಳಿತಾಧಿಕಾರಿ ಮೆಹಮೂದ್ ಇದ್ದರು   

ಕಮಲಾಪುರ: ಇಲ್ಲಿನ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಸೋಮ ವಾರ ಸಾಮಾನ್ಯ ಸಭೆ ನಡೆಯಿತು.

ಈ ವೇಳೆ ಇಒ ಡಾ.ಮಂಜುನಾಥ ಮಾತನಾಡಿ, ಯೋಜನೆಗಳ ಪರಿ ಣಾಮಕಾರಿ ಅನು ಷ್ಠಾನಕ್ಕೆ ಸಾರ್ವ ಜನಿಕರು ಸಹಕರಿಸಬೇಕು. ನನೆಗುದಿಗೆ ಬಿದ್ದ ಕಾಮಗಾರಿಗಳು ತ್ವರಿತವಾಗಿ ಮುಗಿಯಬೇಕು. ಶಾಲಾ ತರಗತಿಗಳ ಆರಂಭಕ್ಕೆ ಶಿಕ್ಷಕರು ಹಾಗೂ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡು, ದಾಖಲಾತಿ ಹೆಚ್ಚಳಕ್ಕೆ ಶ್ರಮಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಗೈರಾದ ವಿದ್ಯಾರ್ಥಿ ಗಳು ಮತ್ತೆ ಹಾಜರಾಗುವಂತೆ ನೋಡಿ ಕೊಳ್ಳಬೇಕು‘ ಎಂದರು.

ಆಡಳಿತಾಧಿಕಾರಿ ಮೆಹಮೂದ್ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಕೆಲವು ಖಾಸಗಿ ಶಾಲಾ ಮಂಡಳಿಗಳು ಮಕ್ಕಳ ಹೆಚ್ಚುವರಿ ಶುಲ್ಕಕ್ಕೆ ಪೋಷಕರನ್ನು ಪೀಡಿಸುವ ಪ್ರಕರಣಗಳು ಕೇಳಿಬರುತ್ತಿವೆ. ಅಂತಹ ಘಟನೆಗಳು ನಡೆದರೆ ಪಾಲಕರು 1098 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ‘ ಕೋರಿದರು.

ADVERTISEMENT

‘ವಸತಿ ನಿಲಯ ಸಮುದಾಯ ಭವನಗಳಿಗೆ ನಿವೇಶನ ಒದಗಿಸಿ, ಬಾಕಿ ಉಳಿದ ಕಟ್ಟಡ ಕಾಮಗಾರಿಗಳು ಪೂರ್ಣಗೊಳಿಸಬೇಕು. ಶಾಲೆಗಳ ಆವರಣಗಳಲ್ಲಿ ಅರಣ್ಯ ಇಲಾಖೆ ಸಸಿ ನೆಡಬೇಕು‘ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಮಾತನಾಡಿ,’ ದಾಖಲಾತಿಗೆ ಒತ್ತು ನೀಡಲಾಗುತ್ತಿದ್ದು, ಸರ್ಕಾರಿ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪ್ರವೇಶ ಬಯಸಿದ್ದಾರೆ‘ ಎಂದರು.

ಕೃಷಿ ಸಹಾಯಕ ನಿರ್ದೇಶಕ ಚಂದ್ರಕಾಂತ ಜೀವಣಗಿ, ರಾಜಕುಮಾರ ಪಾಟೀಲ, ರಾಜಕುಮಾರ ವಾಗ್ಮೋರೆ, ಮೋಹನದಾಸ ಚೌವ್ಹಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.