ADVERTISEMENT

ಕಲಬುರಗಿ: ನಿಜಶರಣ ಅಂಬಿಗರ ಚೌಡಯ್ಯ ಜಯಂತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 16:21 IST
Last Updated 21 ಜನವರಿ 2022, 16:21 IST
ಕಲಬುರಗಿಯಲ್ಲಿ ಶುಕ್ರವಾರ ಆಚರಿಸಲಾದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಮಹಾಂತೇಷ ಮುಡಬಿ, ದತ್ತಪ್ಪ ಸಾಗನೂರ, ತಿಪ್ಪಣ್ಣ ಕಮಕನೂರ ಸೇರಿದಂತೆ ಕೋಲಿ ಸಮಾಜ ಹಲವು ಮುಖಂಡರು ಪಾಲ್ಗೊಂಡರು
ಕಲಬುರಗಿಯಲ್ಲಿ ಶುಕ್ರವಾರ ಆಚರಿಸಲಾದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಮಹಾಂತೇಷ ಮುಡಬಿ, ದತ್ತಪ್ಪ ಸಾಗನೂರ, ತಿಪ್ಪಣ್ಣ ಕಮಕನೂರ ಸೇರಿದಂತೆ ಕೋಲಿ ಸಮಾಜ ಹಲವು ಮುಖಂಡರು ಪಾಲ್ಗೊಂಡರು   

ಕಲಬುರಗಿ: ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ, ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯ ತಹಶೀಲ್ದಾರ್‌ ಮಹಾಂತೇಷ ಮುಡಬಿ ಅವರು ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣ ಕಮಕನೂರ, ಕೋಲಿ ಸಮಾಜ ಮುಖಂಡರಾದ ಶಿವಶರಣಪ್ಪ ಕೋಬಾಳ, ಬಾಬುರಾವ ಕೋಬಾಳ, ಸಂದೇಶ ಕಮಕನೂರ, ಶಾಂತಪ್ಪ ಕೂಡಿ, ವಿಶ್ವರಾಧ್ಯ ಹಳ್ಳಿ, ರಾಯಪ್ಪ ಹೊನಗುಂಟಿ, ಶ್ಯಾಮರಾಯ ಸುಲ್ತಾನಪೂರ, ರಾಮಪ್ಪ ಹೊನಗುಂಟಿ, ಉದಯ ಹೊನಗುಂಟಿ, ಸುಖದೇವ ಕೋಗನೂರ, ಅನಿಲಕೂಡಿ, ಶ್ರೀಕಾಂತ ಆಲೂರ, ಮಲ್ಲುಕೂಡಿ, ಅಶೋಕ ಬಿದನೂರ, ಆಕಾಶ ತಳವಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.