ADVERTISEMENT

ಚೇಂಗಟಾ: ಬಸವೇಶ್ವರ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 13:48 IST
Last Updated 21 ಡಿಸೆಂಬರ್ 2021, 13:48 IST
ಕಮಲಾಪುರ ತಾಲ್ಲೂಕಿನ ಚೇಂಗಟಾ ಗ್ರಾಮದ ಹಾದಿ ಬಸವೇಶ್ವರ ದೇವಾಲಯದಲ್ಲಿ ಸೋಮವಾರ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಇರಮುಡಿ ಪೂಜೆ ಸಲ್ಲಿಸಿದರು
ಕಮಲಾಪುರ ತಾಲ್ಲೂಕಿನ ಚೇಂಗಟಾ ಗ್ರಾಮದ ಹಾದಿ ಬಸವೇಶ್ವರ ದೇವಾಲಯದಲ್ಲಿ ಸೋಮವಾರ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಇರಮುಡಿ ಪೂಜೆ ಸಲ್ಲಿಸಿದರು   

ಕಮಲಾಪುರ: ತಾಲ್ಲೂಕಿನ ಚೇಂಗಟಾ ಗ್ರಾಮದ ಹಾದಿ ಬಸವೇಶ್ವರ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ಇರಮುಡಿ ಪೂಜೆ ಹಾಗೂ ಮಹಾ ಪಡಿ ಪೂಜೆ ಕಾರ್ಯಕ್ರಮ ಜರುಗಿತು.

ಸದಾಶಿವಪೇಟನ ಗುರುಸ್ವಾಮಿ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಗಿದ್ದು, ಬೆಳಿಗ್ಗೆ ಸ್ವಾಮಿ ಅಯ್ಯಪ್ಪ ಮೂರ್ತಿಗೆ ಅಭಿಷೇಕ, ಪೂಜೆ ಭಜನೆ ನಂತರ ಪ್ರಸಾದ ವಿತರಣೆ ಮಾಡಲಾಯಿತು.

ಅಯ್ಯಪ್ಪ ಮಾಲೆ ನಿರತ ಗುರು ಸ್ವಾಮಿ ಮಹೇಶ ಮಂದಿ, ಕನ್ಯಾ ಸ್ವಾಮಿ ನಾಗರಾಜ ಡೊಂಗರಗಿ, ಸಂತೋಷ ಡೊಂಗರಗಿ, ಸುನೀಲ ಪ್ರಭು, ವಿನೋದ ಶರಣ್‌, ಸುನೀಲ, ವೀರೇಶ ಶರಣ್‌, ಅನೀಲ ಬಶೆಟ್ಟಿ, ವಿಜಯಕುಮಾರ, ಜಗದೀಶ ಹಜಪನೂರ, ರೇವಣಸಿದ್ದ ಬಶೆಟ್ಟಿ, ರೇವಣಸಿದ್ದ ಬೋವಿ, ಸಂಜು ನಾಮದಿ, ಚನ್ನವೀರ ನಾಟೀಕಾರ ಮಾಲಾಧಾರಿಗಳಾಗಿದ್ದಾರೆ.

ADVERTISEMENT

ಮಂಗಳವಾರ ಪ್ರಯಾಣಿ ಬೆಳೆಸಿದ ಮಾಲಾಧಾರಿಗಳು ಶಬರಿ ಮಲೆ ಸನ್ನಿಧಾನದಲ್ಲಿ ಡಿ.22 ರಂದು ಇರುಮುಡಿ ಸಲ್ಲಿಸಲಿದ್ದಾರೆ ಎಂದು ಮುಖಂಡ ನಿತೀನ ಚೇಂಗಟಾ ತಿಳಿಸಿದರು.

ಬಸವರಾಜ ಹಾಜಪನೋರ, ಸೋಮಶೇಖರ ಹೂಗರ, ಮಲ್ಲಯ್ಯ ಮಠಪತಿ, ಸಂತೋಶ ಶರಣ್‌, ಆನಂದ ಕಾಬಾ, ಶರಣು ಕೇರಜಿ ಚನ್ನು ಹೂಗಾರ ಮತ್ತಿತರರ ಪೂಜೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.