ADVERTISEMENT

ಬಿ.ಬಸವಲಿಂಗಪ್ಪನವರ ಕೊಡುಗೆ ಅವಿಸ್ಮರಣೀಯ: ಸುನೀಲಕುಮಾರ ವಂಟಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 5:35 IST
Last Updated 22 ಏಪ್ರಿಲ್ 2021, 5:35 IST
ಕಲಬುರ್ಗಿಯ ಜಗತ್ ಬಳಿ ಬಿ. ಬಸವಲಿಂಗಪ್ಪನವರ ಜನ್ಮಶತಮಾನೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು
ಕಲಬುರ್ಗಿಯ ಜಗತ್ ಬಳಿ ಬಿ. ಬಸವಲಿಂಗಪ್ಪನವರ ಜನ್ಮಶತಮಾನೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು   

ಕಲಬುರ್ಗಿ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕರ್ನಾಟಕದಲ್ಲಿ ಶೋಷಿತ ಸಮುದಾಯಕ್ಕೆ ಸ್ವಾಭಿಮಾನದ ಬದುಕು ಕಲ್ಪಿಸಿಕೊಡಲು ನಿರಂತರವಾಗಿ ಶ್ರಮಿಸುವ ಮೂಲಕ ಬಿ.ಬಸವಲಿಂಗಪ್ಪನವರು ಕರ್ನಾಟಕದ ಅಂಬೇಡ್ಕರ್ ಎಂದು ಖ್ಯಾತಿ ಪಡೆದಿದ್ದಾರೆ ಎಂದು ಯುವ ಮುಖಂಡ ಸುನೀಲಕುಮಾರ ವಂಟಿ ಅಭಿಪ್ರಾಯಪಟ್ಟರು.

ನಗರದ ಜಗತ್ ಬಡಾವಣೆಯ ಭೀಮ ನಗರದಲ್ಲಿ ‘ಜೈ ಭೀಮ ಸೇನೆ ಸಮಾಜ ಸೇವಾ ಬಳಗ’ದಿಂದ ಬುಧವಾರ ಜರುಗಿದ ‘ಬಿ.ಬಸವಲಿಂಗಪ್ಪನವರ ಜನ್ಮಶತಮಾನೋತ್ಸವ ಆಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನ ಸಲ್ಲಿಸಿ ಅವರು ಮಾತನಾಡಿದರು.

ಪೌರಾಡಳಿತ ಸಚಿವರಾಗಿ ಮಲಹೊರುವ ಪದ್ಧತಿಯನ್ನು ನಿಷೇಧಿಸುವ ಕ್ರಾಂತಿಕಾರಕ ಕಾರ್ಯವನ್ನು ಮಾಡಿದ್ದಾರೆ. ಭೂಸುಧಾರಣೆ, ಭೂ ರಹಿತರಿಗೆ ಭೂಮಿ ಹಂಚಿಕೆ, ಪರಿಷ್ಟರ ಭೂಮಿ ರದ್ದತಿ ಕಾನೂನು, ಜೀತಮುಕ್ತಿ ಕಾನೂನು ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ದಲಿತರಲ್ಲಿ ವೈಚಾರಿಕತೆ ಮೂಡಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅವರ ಮಾರ್ಗದಲ್ಲಿ ದಲಿತ ವರ್ಗ ಸಾಗಬೇಕಾಗಿದೆಯೆಂದು ನುಡಿದರು.

ADVERTISEMENT

ಕಾರ್ಯಕ್ರಮದಲ್ಲಿ ಪ್ರಮುಖರಾದ ಸುಭಾಷ ಫರತಾಬಾದ, ಜಗದೀಶ ವಳಕೇರಿ, ಎಚ್.ಬಿ.ಪಾಟೀಲ, ಬಸವರಾಜ ಎಸ್.ಪುರಾಣೆ, ಸಂಬಣ್ಣ ಪುಟಗಿ, ನಾಗೇಶ ಸರಡಗಿ, ಅಂಬಣ್ಣ ಕೊಲ್ಲೂರ್, ಈಶ್ವರ ಫರತಾಬಾದ, ಜ್ಞಾನಪ್ರಕಾಶ ಮೂಲಭಾರತಿ, ಸಂದೀಪ ಭರಣಿ, ವಿಕ್ಕಿ ಭಾಸ್ಕರ್, ರಾಜೇಂದ್ರ ವಂಟಿ, ಜಗನಾಥ ವಂಟಿ, ಸಿದ್ದಾರ್ಥ ಸಂಕಾ, ಗೌತಮ, ಶುಭಂ, ಸತೀಶ, ಅಗರ್ ಹುಬಳಿ, ಮೌನೇಶ, ಅನೀಲಕುಮಾರ ಮೈಸಲಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.