ಕಲಬುರ್ಗಿ: ಮಹಾರಾಷ್ಟ್ರದ ವೀರ್ ಅಣೆಕಟ್ಟೆಯಿಂದ ಬಿಡಲಾದ 40 ಸಾವಿರ ಕ್ಯುಸೆಕ್ ನೀರು ಭಾನುವಾರ ಜಿಲ್ಲೆಯ ಸೊನ್ನ ಭೀಮಾ ಬ್ಯಾರೇಜಿಗೆ ತಲುಪಿದ್ದು, ಅಷ್ಟೇ ಪ್ರಮಾಣದ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಿದೆ.
ಅಫಜಲಪೂರ, ಚಿತ್ತಾಪುರ, ಜೇವರ್ಗಿ, ಸಿಂದಗಿ ತಾಲ್ಲೂಕಿನ ನದಿ ಪಾತ್ರದವರು ಎಚ್ಚರಿಕೆಯಿಂದಿರಲು ಭೀಮಾ ಏತ ನೀರಾವರಿ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ಕಲಾಲ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.