ADVERTISEMENT

ಭೀಮಾನದಿಗೆ 3.50 ಲಕ್ಷ ಕ್ಯುಸೆಕ್ ನೀರು: ಬಡಾವಣೆಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 5:15 IST
Last Updated 16 ಅಕ್ಟೋಬರ್ 2020, 5:15 IST
ಯಾದಗಿರಿಯ ಭೀಮಾ‌ನದಿಗೆ ಹೊಂದಿಕೊಂಡಿರುವ ವೀರಭದ್ರೇಶ್ವರ ಬಡಾವಣೆಯಲ್ಲಿ ನೀರು ನುಗ್ಗಿ ಜಲಾವೃತಗೊಂಡಿದೆ
ಯಾದಗಿರಿಯ ಭೀಮಾ‌ನದಿಗೆ ಹೊಂದಿಕೊಂಡಿರುವ ವೀರಭದ್ರೇಶ್ವರ ಬಡಾವಣೆಯಲ್ಲಿ ನೀರು ನುಗ್ಗಿ ಜಲಾವೃತಗೊಂಡಿದೆ   

ಯಾದಗಿರಿ: ಸನ್ನತಿ ಬ್ಯಾರೇಜ್ನಿಂದ ಭೀಮಾ ನದಿಗೆ 3.50 ಲಕ್ಷ ಕ್ಯುಸೆಕ್ ನೀರು ಹರಿಸುತ್ತಿದ್ದು, ನದಿಯಂಚಿನ ನಗರದ ಬಡಾವಣೆಗೆ ನೀರು ನುಗ್ಗಿದೆ.

ಭೀಮಾ‌ನದಿಗೆ ಹೊಂದಿಕೊಂಡಿರುವ ವೀರಭದ್ರೇಶ್ವರ ಬಡಾವಣೆಯ ವಿನಾಯಕ ದೇವಸ್ಥಾನ ಹಾಗೂ ಮನೆಗಳಿಗೆ ನೀರು ನುಗ್ಗಿ ಜಲಾವೃತ್ತಗೊಂಡಿದೆ.

ಭೀಮಾ ನದಿಗೆ ಮತ್ತಷ್ಟು ನೀರು ಹರಿಸುವ ಸಾಧ್ಯತೆ ಇರುವುದರಿಂದ ರೈಲ್ವೆ ಹಳಿಯ ಸಮೀಪ ನೀರು ಆವರಿಸುವ ಸಾಧ್ಯತೆ ಇದೆ. ಇದರಿಂದ ಭೀಮಾ ನದಿ ನೀರು ನಗರದ ವಿವಿಧ ಬಡಾವಣೆಗಳಿಗೆ ನುಗ್ಗುವ ಸಂಭವವಿದೆ ಎಂದು ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.