ADVERTISEMENT

12 ವರ್ಷದ ಬಾಲಕ ನೇಣಿಗೆ ಶರಣು

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 12:06 IST
Last Updated 27 ಜನವರಿ 2021, 12:06 IST
ಮಧುಕರ
ಮಧುಕರ   

ಚಿಂಚೋಳಿ: ಬಾಲಕನೊಬ್ಬ ದೊಡ್ಡ ಮರವೊಂದಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಕುಂಚಾವರಂ‌ ಬಳಿಯ ಲಕ್ಷ್ಮಾಸಾಗರ ಗ್ರಾಮದ ಹೊರ ವಲಯದಲ್ಲಿ ಮಂಗಳವಾರ ರಾತ್ರಿ ಬೆಳಕಿಗೆ ನಡೆದಿದೆ.

ಮಧುಕರ ಲಕ್ಷ್ಮಪ್ಪ (12) ಗ್ರಾಮದ ಹೊರವಲಯದಲ್ಲಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ದನ ಮೇಯಿಸಲು ಅಡವಿಗೆ ಹೋಗಿದ್ದ ಮಧುಕರ, ಅಡವಿಯಲ್ಲಿ ದನಗಳನ್ನು ಬಿಟ್ಟು ಸಮೀಪದ ಹಳ್ಳಿಯಲ್ಲಿ ನಡೆದ ಜಾತ್ರೆಗೆ ಸಂಗಡಿಗರೊಂದಿಗೆ ಹೋಗಿದ್ದರು. ಮರಳಿ ಬಂದಾಗ ಆಕಳು ಮನೆಗೆ ಬಂದಿಲ್ಲ ಎಂಬುದು ಗೊತ್ತಾಗಿದೆ.

ನಿಮ್ಮ ಆಕಳು ಮನೆಗೆ ಬಂದಿಲ್ಲ ನಿಮ್ಮ ತಂದೆ ತಾಯಿ ನಿನ್ನನ್ನು ಹೊಡೆಯುತ್ತಾರೆ ಎಂದು ಹೆದರಿಸಿದ್ದರಿಂದ ಮಧುಕರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಂಚಾವರಂ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಉಪೇಂದ್ರಕುಮಾರ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.