ADVERTISEMENT

ಗಡಿ ಜಿಲ್ಲೆಗಳಲ್ಲಿ ನೆರೆ ರಾಜ್ಯಗಳ ಬಸ್ ಸೇವೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 3:02 IST
Last Updated 10 ಏಪ್ರಿಲ್ 2021, 3:02 IST
ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಹಾಜರಾದ ಕಲಬುರ್ಗಿ ವಿಭಾಗದ ಬಸ್‌ ಚಾಲಕ ಮಹಮದ್‌ ಚಾಂದ್‌ ಪಟೇಲ್‌ ಅವರನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಶುಕ್ರವಾರ ಹುಮನಾಬಾದ್‌ ಮಾರ್ಗ ಮಾಧ್ಯದಲ್ಲಿ ವಾಹನ ನಿಲ್ಲಿಸಿ ಅಭಿನಂದಿಸಿದರು
ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಹಾಜರಾದ ಕಲಬುರ್ಗಿ ವಿಭಾಗದ ಬಸ್‌ ಚಾಲಕ ಮಹಮದ್‌ ಚಾಂದ್‌ ಪಟೇಲ್‌ ಅವರನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಶುಕ್ರವಾರ ಹುಮನಾಬಾದ್‌ ಮಾರ್ಗ ಮಾಧ್ಯದಲ್ಲಿ ವಾಹನ ನಿಲ್ಲಿಸಿ ಅಭಿನಂದಿಸಿದರು   

ಕಲಬುರ್ಗಿ/ಬೀದರ್‌: ಈಶಾನ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಮನವಿ ಮೇರೆಗೆನೆರೆಯ ತೆಲಂಗಾಣ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸಾರಿಗೆ ನಿಗಮಗಳು ಗಡಿ ಜಿಲ್ಲೆಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿವೆ.

ಶುಕ್ರವಾರ ತೆಲಂಗಾಣದ 150, ಆಂಧ್ರಪ್ರದೇಶದ 32 ಹಾಗೂ ಮಹಾರಾಷ್ಟ್ರದ 85 ಬಸ್‌ಗಳು ಸಂಚರಿಸಿದವು.

ಈಶಾನ್ಯ ಸಾರಿಗೆ ಸಂಸ್ಥೆಯು ಕಲಬುರ್ಗಿ ಮತ್ತು ಬೀದರ್‌ಗಳಿಂದಹೈದರಾಬಾದ್‌ಗೆ ಬಸ್‌ ಸೇವೆ ಆರಂಭಿಸಿದೆ.

ADVERTISEMENT

34 ಮಂದಿ ನಿವೃತ್ತ ಚಾಲಕರು ಶುಕ್ರವಾರ ಸೇವೆ ನೀಡಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಎಂ.ಕೂರ್ಮಾರಾವ್‌ ತಿಳಿಸಿದ್ದಾರೆ.

ಸಚಿವರ ಅಭಿನಂದನೆ: ಮುಷ್ಕರದ ಸಂದರ್ಭದಲ್ಲಿ ಕೂಡ ಕರ್ತವ್ಯಕ್ಕೆ ಹಾಜರಾಗಿ ಬಸ್‌ ಓಡಿಸಿದ ಕಲಬುರ್ಗಿ ವಿಭಾಗದ ಚಾಲಕ ಮಹಮದ್‌ ಚಾಂದ್‌ ಪಟೇಲ್‌ ಅವರನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಶುಕ್ರವಾರ ಹುಮನಾಬಾದ್‌ ಬಳಿ ಮಾರ್ಗ ಮಧ್ಯದಲ್ಲಿ ವಾಹನ ನಿಲ್ಲಿಸಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.