ADVERTISEMENT

‘ಕೋಳಿ ಭಾಗ್ಯ’ವನ್ನೂ ಕೊಡ್ತಿದ್ವಿ: ಸಿ.ಎಂ.ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 11:07 IST
Last Updated 19 ಏಪ್ರಿಲ್ 2019, 11:07 IST
ಸಿ.ಎಂ.ಇಬ್ರಾಹಿಂ
ಸಿ.ಎಂ.ಇಬ್ರಾಹಿಂ   

ಕಲಬುರ್ಗಿ: ಇನ್ನು ಸ್ವಲ್ಪ ದಿನ ಸರ್ಕಾರ ಇದ್ದಿದ್ದರೆ ನಾವು ‘ಕೋಳಿ ಭಾಗ್ಯ’ವನ್ನೂ ಕೊಡ್ತಿದ್ದೇವು ಎಂದುಕೆಪಿಸಿಸಿ ಮಾಧ್ಯಮ ಪ್ರಚಾರ ಸಮಿತಿ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.

ಚುನಾವಣೆ ಪ್ರಚಾರಾರ್ಥ ನಗರದಲ್ಲಿ ಗುರುವಾರ ಕಾಂಗ್ರೆಸ್‌ ಆಯೋಜಿಸಿದ್ದ ಬಂಜಾರ ಸಮಾಜದ ಸಮಾವೇಶದಲ್ಲಿಅವರು ಮಾತನಾಡಿದರು.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಸಾಧನೆ ತೆರೆದಿಟ್ಟ ಸಿ.ಎಂ. ಇಬ್ರಾಹಿಂ, ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅನ್ನ ಭಾಗ್ಯ, ಕ್ಷೀರ ಭಾಗ್ಯ ನೀಡಿದ್ದಾರೆ. ಮಕ್ಕಳಿಗೆ ವಾರಕ್ಕೆ ಐದು ದಿನ ಮೊಟ್ಟೆ ಭಾಗ್ಯ ನೀಡಿದರು. ಇನ್ನು ಸ್ವಲ್ಪ ದಿನ ಸರ್ಕಾರ ಇದ್ದಿದ್ದರೆ ನಾವು ‘ಕೋಳಿ ಭಾಗ್ಯ’ವನ್ನೂ ಕೊಡ್ತಿದ್ದೇವು’ ಹಾಸ್ಯ ಚಟಾಕಿ ಹಾರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.