ಕಲಬುರ್ಗಿ: ಕೊರೊನಾ ಸೋಂಕು ತಗುಲಿದ್ದ ತಂದೆ– ಮಗ ಒಂದೇ ದಿನ ಸಾವನ್ನಪ್ಪಿದ್ದರೆ, ತಾಯಿ ಕೂಡ 15 ದಿನದ ಹಿಂದೆ ತೀರಿಕೊಂಡಿದ್ದಾರೆ. ಎರಡೇ ವಾರಗಳಲ್ಲಿ ತಂದೆ– ತಾಯಿ– ಮಗ ಮೂವರೂ ಸೋಂಕಿನಿಂದ ಸಾವನ್ನಪ್ಪಿದ್ದು ಕುಟುಂಬ ತತ್ತರಿಸಿಹೋಗಿದೆ.
ಕಲಬುರ್ಗಿಯ ಮಹಾ ಭೀಮಾನಗರದ ನಿವಾಸಿ ಶ್ರೀಪತರಾವ್ ಬಡಿಗೇರ (66) ಅವರು ಗುರುವಾರ ಬೆಳಿಗ್ಗೆ ನಗರದ ಮೋಹನರಾಜ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅದೇ ದಿನ ಸಂಜೆ ಅವರ ಪುತ್ರ ಮೌನೇಶಕುಮಾರ (41) ಕೂಡ ಸಾವನ್ನಪ್ಪಿದರು. ಮೌನೇಶಕುಮಾರ ಅವರ ತಾಯಿ ಕೂಡ ಕೇವಲ 15 ದಿನಗಳ ಹಿಂದೆ ಕೊರೊನಾ ಸೋಂಕಿನಿಂದಾಗಿಯೇ ಮೃತಪಟ್ಟಿದ್ದಾರೆ. ಇಡೀ ಕುಟುಂಬದಲ್ಲಿ ಈಗ ಮೌನೇಶಕುಮಾರ ಅವರ ಪತ್ನಿ ಹಾಗೂ ಅವರ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಮಾತ್ರ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.