ADVERTISEMENT

ದೀಪಾವಳಿ ಹಬ್ಬದ ಬೋನಸ್‌ಗಾಗಿ ಟವರ್ ಏರಿದ ಕಾರ್ಮಿಕ!

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 5:05 IST
Last Updated 23 ಅಕ್ಟೋಬರ್ 2022, 5:05 IST
ಶಹಾಬಾದ್ ಜೆಪಿ ಕಾರ್ಖಾನೆಯ ಟವರ್ ಏರಿ ಪ್ರತಿಭಟನೆ ಮಾಡಿದ ಕಾರ್ಮಿಕ
ಶಹಾಬಾದ್ ಜೆಪಿ ಕಾರ್ಖಾನೆಯ ಟವರ್ ಏರಿ ಪ್ರತಿಭಟನೆ ಮಾಡಿದ ಕಾರ್ಮಿಕ   

ಶಹಾಬಾದ್: ನಗರದ ಜೆಪಿ ಸಿಮೆಂಟ್‌ ಕಾರ್ಖಾನೆಯವರು ದೀಪಾವಳಿ ಹಬ್ಬದ ಬೋನಸ್ ನೀಡಿಲ್ಲ ಎಂದು ಕಾರ್ಮಿಕರೊಬ್ಬರು ಕಾರ್ಖಾನೆಯ ಟವರ್ ಏರಿ ಪ್ರತಿಭಟನೆ ನಡೆಸಿರುವ ಘಟನೆ ಶನಿವಾರ ನಡೆದಿದೆ.

ಮಹ್ಮದ್ ರಶೀದ್ ಟವರ್ ಏರಿ ಪ್ರತಿಭಟನೆ ನಡೆಸಿದ ಕಾರ್ಮಿಕ. ಕಾರ್ಖಾನೆಯ ನಿಯಮದ ಪ್ರಕಾರ ದೀಪಾವಳಿಗೊಮ್ಮ ಕಾರ್ಮಿಕರಿಗೆ ಬೋನಸ್ ನೀಡಬೇಕು. ಆದರೆ ಈ ವರ್ಷ ಬೋನಸ್ ನೀಡಿಲ್ಲವೆಂದು ಟವರ್ ಏರಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಬೋನಸ್ ನೀಡುವವರೆಗೂ ಕೆಳಗೆ ಇಳಿಯುವುದಿಲ್ಲವೆಂದು ಎಂದ ಹಠ ಹಿಡಿದಿದ್ದರು ಎನ್ನಲಾಗಿದೆ. ಕಾರ್ಖಾನೆಯ ಅಧಿಕಾರಿಗಳು ತಿಳಿಹೇಳಿ ಕೆಳಗಿಳಿಸಿರುವುದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT