ADVERTISEMENT

ಸಂಪಿಗೆ ನಗರ; ಆರೋಗ್ಯ ತಪಾಸಣೆ ಶಿಬಿರ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 16:10 IST
Last Updated 3 ಅಕ್ಟೋಬರ್ 2021, 16:10 IST
ಕಲಬುರ್ಗಿಯ ಸಂಪಿಗೆ ನಗರದ ಈಶ್ವರ ದೇವಸ್ಥಾನದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು
ಕಲಬುರ್ಗಿಯ ಸಂಪಿಗೆ ನಗರದ ಈಶ್ವರ ದೇವಸ್ಥಾನದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು   

ಕಲಬುರ್ಗಿ: ನಗರದ ಹಳೆ‌ ಜೇವರ್ಗಿ ರಸ್ತೆಯ ಸಂಪಿಗೆ ನಗರದ ಈಶ್ವರ ದೇವಾಲಯ ಸದ್ಭಕ್ತ ಮಂಡಳಿ ವತಿಯಿಂದ ಏರ್ಪಡಿಸಿದ್ದ ಎರಡು ದಿನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ಸಮಾರೋಪಗೊಂಡಿತು.

ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಶಿಬಿರವನ್ನು ಉದ್ಘಾಟಿಸಿದರು. ಶಿಬಿರದಲ್ಲಿ ಎರಡೂ ದಿನ ಸೇರಿ ಸಾವಿರಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆಗೆ ಒಳಗಾದರು.

200 ಜನ ಹಿರಿಯ ನಾಗರಿಕರಿಗೆ ನೇತ್ರ ತಪಾಸಣೆ ಮಾಡಿ ಉಚಿತವಾಗಿ ಕನ್ನಡಕ‌ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡಲಾಯಿತು. ಅಲ್ಲದೆ, ಮಧುಮೇಹ, ರಕ್ತದೊತ್ತಡ, ದಂತ, ನೇತ್ರ ತಪಾಸಣೆ ನಡೆಸಿ, ಅಗತ್ಯ ಚಿಕಿತ್ಸೆ ನೀಡಲಾಯಿತು.

ADVERTISEMENT

ವಿಧಾನ ಪರಿಷತ್ ಮಾಜಿ‌ ಸದಸ್ಯ ಅಲ್ಲಮಪ್ರಭು ಪಾಟೀಲ, ಮಾಜಿ ಸಚಿವ ರೇವುನಾಯಕ‌ ಬೆಳಮಗಿ, ಮುಖಂಡ ಕೃಷ್ಣಾಜಿ, ಪಾಲಿಕೆ ಸದಸ್ಯೆ‌ ನಿಂಗಮ್ಮ ಕಟ್ಟಿಮನಿ, ದೇವಸ್ಥಾನ‌ ಮಂಡಳಿ ಅಧ್ಯಕ್ಷ ರಾಜಶೇಖರ ಪಾಟೀಲ ಅಪ್ಪಾಜಿ, ಮುಖಂಡರಾದ ಚಂದ್ರಕಾಂತ ಗುತ್ತೇದಾರ, ಅರುಣಕುಮಾರ ಪಾಟೀಲ, ಮರಲಿಂಗಪ್ಪ ಕಿಣಕೇರಿ, ವಿರೇಶ ಎಂ.ಕ್ಷತ್ರಿಯ, ಪ್ರೇಮಕುಮಾರ ರಾಠೋಡ, ರಾಜೇಶ ಮಾನೆ, ತಿಪ್ಪಣ್ಣ ದೊಡಮನಿ ಇದ್ದರು.

ಅಶ್ವತ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸದಾಶಿವ ನೇತ್ರಾಲಯ, ಸಪ್ತಗಿರಿ ಆಪ್ಟಿಕಲ್ಸ್, ಶ್ರೀಸಾಯಿ ಹಲ್ಲಿನ ಆಸ್ಪತ್ರೆ, ಪ್ರಧಾನಮಂತ್ರಿ ಜನೌಷಧ ಕೇಂದ್ರದ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.