ADVERTISEMENT

ಚಿನ್ನಾಭರಣ, ಬೈಕ್ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 9:07 IST
Last Updated 22 ಜುಲೈ 2020, 9:07 IST
ಬಂಧಿತ ಆರೋಪಿಗಳೊಂದಿಗೆ ಫರಹತಾಬಾದ್ ಠಾಣೆ ಪೊಲೀಸರು ಇದ್ದಾರೆ
ಬಂಧಿತ ಆರೋಪಿಗಳೊಂದಿಗೆ ಫರಹತಾಬಾದ್ ಠಾಣೆ ಪೊಲೀಸರು ಇದ್ದಾರೆ   

ಕಲಬುರ್ಗಿ: ನಗರದ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣವನ್ನು ಕಳ್ಳತನ ಮಾಡಿ, ವ್ಯಕ್ತಿಯೊಬ್ಬರಿಂದ ಬೈಕ್‌ನ್ನು ಬಲವಂತವಾಗಿ ಕಿತ್ತುಕೊಂಡು, ಚಿನ್ನವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರು ಕಳ್ಳರನ್ನು ಫರಹತಾಬಾದ್‌ ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

ಕಲಬುರ್ಗಿಯ ಆದರ್ಶ ನಗರದ ನಿವಾಸಿ ಆಸೀಫ್‌ ಜಾವೀದ್‌ ಪಟೇಲ್ (19) ಹಾಗೂ ಗುಬ್ಬಿ ಕಾಲೊನಿ ನಿವಾಸಿ ಆಕಾಶ ಚಂದ್ರಕಾಂತ ಗುತ್ತೇದಾರ ಎಂಬುವವರೇ ಕಳ್ಳತನ ಮಾಡಿ ಸಿಕ್ಕಿಬಿದ್ದವರು.

ಫರಹತಾಬಾದ್‌ ಪೊಲೀಸ್ ಇನ್‌ಸ್ಪೆಕ್ಟರ್‌ ಎಂ.ಬಿ. ಚಿಕ್ಕಣ್ಣವರ ಅವರು ಸಿಬ್ಬಂದಿಯೊಂದಿಗೆ ಖಣದಾಳ ಕ್ರಾಸ್‌ ಬಳಿ ಗಸ್ತು ತಿರುಗುತ್ತಿರುವ ಸಂದರ್ಭದಲ್ಲಿ ಇಬ್ಬರೂ ಬೈಕ್‌ನಲ್ಲಿ ಹೊರಟಿದ್ದರು. ಇವರ ಮೇಲೆ ಸಂಶಯ ಬಂದು ವಿಚಾರಿಸಿದಾಗ ಆದರ್ಶನಗರದ ಬ್ರಹ್ಮಕುಮಾರಿ ಆಶ್ರಮದ ಹಿಂದಿನ ಮನೆಯಲ್ಲಿ ₹ 84 ಸಾವಿರ ಮೊತ್ತದ ಚಿನ್ನದ ಮಂಗಳಸೂತ್ರ, ₹ 10 ಸಾವಿರ ಮೌಲ್ಯದ ಮೊಬೈಲ್, ಓಜಾ ಕಾಲೊನಿಯಲ್ಲಿ ಬೈಕ್‌ ಕದ್ದಿರುವ ಬಗ್ಗೆ ಪೊಲೀಸರ ಎದುರು ತಪ್ಪೊಪ್ಪಿಕೊಂಡರು.

ADVERTISEMENT

ಇಬ್ಬರನ್ನೂ ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.