ಕಮಲಾಪುರ: ತಾಲ್ಲೂಕಿನಹೊಳಕುಂದಾ ಗ್ರಾಮದಲ್ಲಿ ಕಳೆದ ವರ್ಷ ಗುಂಡಪ್ಪ ನಾಗಣ್ಣ ಮೋಳಕೇರಿ ಎಂಬುವವರ ಮನೆಯಲ್ಲಿ ಚಿನ್ನ, ನಗದು ಕಳುವು ಮಾಡಿದವರನ್ನು ಪೊಲೀಸರು ಪತ್ತೆ ಹಚ್ಚಿದ್ದು, 28 ಗ್ರಾಂ. ಚಿನ್ನವನ್ನು ಭಾನುವಾರ ಮಾಲೀಕನಿಗೆ ಒಪ್ಪಿಸಿದ್ದಾರೆ.
‘ಫೆ. 5, 2018 ರಂದು ಕಳುವು ಮಾಡಿದ್ದರು. ಈ ತಂಡದವರು ಜು. 19, 2019ರಂದು ರಾಯಚೂರು ಪೊಲೀಸ್ ಠಾಣೆಯಲ್ಲಿ ಸಿಕ್ಕಿಬಿದ್ದಿದ್ದಾಗ ಬಾಯಿಬಿಟ್ಟಿದ್ದಾರೆ. ಅಲ್ಲಿಂದ ಅವರು ಕಳುಹಿಸಿದ್ದು ನಾವು ಮರಳಿಸಿದ್ದೇವೆ’ ಎಂದು ಸಿಪಿಐ ರಾಘವೇಂದ್ರ ಭಜಂತ್ರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.