ಕಲಬುರ್ಗಿ: ಕೊರೊನಾ ಸೋಂಕಿನ ಭೀತಿಯಿಂದಾಗಿ ಇದೇ 20ರಂದು ನಡೆಯಬೇಕಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಘಟಿಕೋತ್ಸವವನ್ನು ಮುಂದೂಡಲಾಗಿದೆ.
ಅಲ್ಲದೇ, ವಿ.ವಿ.ಯಿಂದ ಆಯೋಜಿಸಬೇಕಿದ್ದ ವಿವಿಧ ವಿಚಾರ ಸಂಕಿರಣಗಳು ಹಾಗೂ ಇದೇ 16ರಿಂದ ನಡೆಯಲಿದ್ದ ಎನ್ ಎಸ್ ಎಸ್ ವಿಶೇಷ ಶಿಬಿರವನ್ನು ರದ್ದುಗೊಳಿಸಲಾಗಿದೆ.
ಇದೇ 14ರಂದು ನಡೆಯಬೇಕಿದ್ದ ಕರ್ನಾಟಕ ಕೇಂದ್ರೀಯ ವಿ.ವಿ.ಯ ಘಟಿಕೋತ್ಸವವನ್ನೂ ಈಗಾಗಲೇ ಮುಂದೂಡಲಾಗಿದೆ. ಈ ಘಟಿಕೋತ್ಸವದಲ್ಲಿ ಯುಜಿಸಿ ಅಧ್ಯಕ್ಷರು ಭಾಗವಹಿಸಬೇಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.