ಜೇವರ್ಗಿ: ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಶನಿವಾರ ಹನುಮ ಜಯಂತಿ ಜರುಗಿತು.
ಶಾಂತಯ್ಯಸ್ವಾಮಿ ಸ್ಥಾವರಮಠ ಅವರು ಬೆಳಗ್ಗೆ 6 ಗಂಟೆಗೆ ವಿಶೇಷ ಪೂಜೆ, ಅಲಂಕಾರ ಹಾಗೂ ಪಂಚಾಮೃತ ಅಭಿಷೇಕ ನೆರವೇರಿಸಿದರು. ಪೊಲೀಸ್ ಠಾಣೆ ಸಿಬ್ಬಂದಿಗಳಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ತಹಶೀಲ್ದಾರ್ ವಿನಯಕುಮಾರ ಪಾಟೀಲ, ಟಿಎಚ್ಒ ಸಿದ್ದು ಪಾಟೀಲ, ಸಬ್ ಇನ್ಸ್ಪೆಕ್ಟರ್ ಸಂಗಮೇಶ ಅಂಗಡಿ, ಅಬ್ದುಲ್ ನಬೀ, ಅಶೋಕ ನಾಯಕ, ಸಂಗಣ್ಣಗೌಡ ಪಾಟೀಲ ಗುಂದಗಿ, ಡಿ.ಬಿ.ಪಾಟೀಲ, ವನೀತಾ ಸಿತಾಳೆ, ಎಎಸ್ಐ ಗುರುಬಸಪ್ಪ, ಬಸಣ್ಣಗೌಡ, ಶಿವರಾಯ, ಶ್ರೀಮಂತ, ಶಿವಲಿಂಗ, ಅಂಬರೀಶ, ಸುರೇಶ, ಧರ್ಮರಾಯ ಶ್ರೀಶೈಲ, ಅವ್ವಣ್ಣ, ಲಾಲಪ್ಪ, ಸಿಪಿಐ ಶಿವಪ್ರಸಾದ ಮಠದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.