ADVERTISEMENT

ಹಾರಕೂಡ ಜಾತ್ರೆ: ಶಾಂತಿ ಸಭೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 2:29 IST
Last Updated 10 ಮಾರ್ಚ್ 2022, 2:29 IST
ಚಿಂಚೋಳಿಯ ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ರಾತ್ರಿ ಚನ್ನವೀರ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು
ಚಿಂಚೋಳಿಯ ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ರಾತ್ರಿ ಚನ್ನವೀರ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು   

ಚಿಂಚೋಳಿ: ಹಾರಕೂಡ ಚನ್ನಬಸವ ಶಿವಯೋಗಿಗಳ 71ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ರಾತ್ರಿ ಶ್ರೀಮಠದ‌ ಡಾ. ಚನ್ನವೀರ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.

ಮಾ.3ರಿಂದಜಾತ್ರಾ ಮಹೋತ್ಸವ ನಡೆಯುತ್ತಿದ್ದು ಕಲಬುರಗಿ ಶರಣಬಸವೇಶ್ವರ ಪುರಾಣ ನಡೆಯುತ್ತಿದೆ. 11ರಂದು ಪಲ್ಲಕ್ಕಿ ಮತ್ತು‌ಉಚ್ಚಾಯಿ ಮೆರವಣಿಗೆ ಸಾಗುವ ಮಾರ್ಗ, ಮಾ. 12ರಂದು ನಡೆಯುವ ರಥೋತ್ಸವ, ಶಿವಾನುಭವ ಚಿಂತನ ಮತ್ತು ಮಾ.23ರಂದು ನಡೆಯುವ ಜಂಗಿ ಪೈಲ್ವಾನರ ಕುಸ್ತಿ, ಪಶುಗಳ ಪ್ರದರ್ಶನ ಹಾಗೂ ಸಂಗೀತ ರಸ ಮಂಜರಿ‌ ಕಾರ್ಯಕ್ರಮದ ವಿವರಗಳನ್ನು ಪೊಲೀಸರು ಪಡೆದರು.

ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರೆ ಸರ್ವಧರ್ಮ ಸಮನ್ವಯದ ಮಾದರಿಯಲ್ಲಿ ನಡೆಸಲಾಗುತ್ತದೆ. ಕೋಮು ಸೌಹಾರ್ದತೆ ಕಾಪಾಡುವುದರ ಜತೆಗೆ ಕೋವಿಡ್ ನಿಯಮ ಪಾಲಿಸಲಾಗುವುದು ಎಂದು ಡಾ. ಚನ್ನವೀರ ಶಿವಾಚಾರ್ಯ ತಿಳಿಸಿದರು.

ADVERTISEMENT

ಈ ವೇಳೆ ಡಿವೈಎಸ್ಪಿ‌ ಬಸವೇಶ್ವರ ಹೀರಾ, ಸರ್ಕಲ್ ಇನಸ್ಪೆಕ್ಟರ್ ಮಹಾಂತೇಶ ಪಾಟೀಲ, ಸನ್‌ಇನ್‌ಸ್ಪೆಕ್ಟರ್ ಮಂಜುನಾಥರೆಡ್ಡಿ ಶಹಾಪುರ, ನಾಗರಾಜ ಶೆಳಕೆ ಹಾಗೂ ಜಾತ್ರಾ ಮಹೋತ್ಸವ ಸಮಿತಿಯ ಮುಖ್ಯಸ್ಥ ಸುಭಾಷ ಸೀಳಿನ್, ರಾಜಶೇಖರ ಮಜ್ಜಗಿ, ನಾಗರಾಜ ಕಲಬುರಗಿ, ಇಂದುಶೇಖರ ಗೌಡನಹಳ್ಳಿ, ರೇವಣಸಿದ್ದಪ್ಪ ಮಜ್ಜಗಿ, ಸಂಗಮೇಶ ಮಾಲಿ, ವಿರೂಪಾಕ್ಷಪ್ಪ ಯಂಪಳ್ಳಿ, ಮಲ್ಲಿಕಾರ್ಜುನ ಅಲ್ಲಾಪುರ, ನಾಗರಾಜ ಮಲಕೂಡ, ರಾಜು ಪಟಪಳ್ಳಿ, ರವಿಕುಮಾರ ಹುಸೇಬಾಯಿ, ಮಧುಕರ ಕೊಳ್ಳೂರು, ಸಂಗಮೇಶ ಮೂಲಿಮನಿ, ಮಲ್ಲಿಕಾರ್ಜುನ ಪಾಲಾಮೂರ ಸೇರಿದಂತೆ ಶ್ರೀ ಮಠದ ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.