ADVERTISEMENT

ಕಲಬುರಗಿ: ₹ 7.50 ಲಕ್ಷ ಮೌಲ್ಯದ ಅಕ್ರಮ ಮರಳು ಜಪ್ತಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 16:20 IST
Last Updated 24 ಮಾರ್ಚ್ 2024, 16:20 IST
ಕಲಬುರಗಿಯ ಅಫಜಲಪುರ ತಾಲ್ಲೂಕಿನ ಭೀಮಾ ನದಿ ಪಾತ್ರದಲ್ಲಿ ಅಕ್ರಮವಾಗಿ ತೆಗೆದು ಜಮೀನೊಂದರಲ್ಲಿ ಸಂಗ್ರಹಿಸಿ ಇರಿಸಲಾದ ಮರಳು
ಕಲಬುರಗಿಯ ಅಫಜಲಪುರ ತಾಲ್ಲೂಕಿನ ಭೀಮಾ ನದಿ ಪಾತ್ರದಲ್ಲಿ ಅಕ್ರಮವಾಗಿ ತೆಗೆದು ಜಮೀನೊಂದರಲ್ಲಿ ಸಂಗ್ರಹಿಸಿ ಇರಿಸಲಾದ ಮರಳು   

ಕಲಬುರಗಿ: ಅಫಜಲಪುರ ತಾಲ್ಲೂಕಿನ ಭೀಮಾ ನದಿ ಪಾತ್ರದಲ್ಲಿ ಅಕ್ರಮವಾಗಿ ತೆಗೆಯಲಾದ ₹ 7.50 ಲಕ್ಷ ಮೌಲ್ಯದ ಮರಳು ಸಂಗ್ರಹ ಅಡ್ಡೆಗಳ ಮೇಲೆ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ.

ಅಕ್ರಮವಾಗಿ ಮರಳು ಸಂಗ್ರಹಿಸಿ ಇರಿಸಿದ ಆರೋಪದಡಿ ಏಳು ಮಂದಿ ಜಮೀನು ಮಾಲೀಕರ ವಿರುದ್ಧ ಅಫಜಲಪುರ ಪೊಲೀಸ್‌ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿವೆ.

ದೇಸಾಯಿ ಕಲ್ಲೂರ ಗ್ರಾಮದ ಜಮೀನಿನಲ್ಲಿ ₹ 2.70 ಲಕ್ಷ ಮೌಲ್ಯದ 135 ಟ್ರ್ಯಾಕ್ಟರ್‌ನಷ್ಟು ಮರಳು ವಶಕ್ಕೆ ಪಡೆಯಲಾಗಿದೆ. ಉಳಿದಂತೆ ಗುಡ್ಡೇವಾಡಿ ಗ್ರಾಮದ ಮೂರು ಜಮೀನುಗಳಲ್ಲಿ ₹ 4 ಲಕ್ಷ ಮೌಲ್ಯದ 200 ಟ್ರ್ಯಾಕ್ಟರ್ ಹಾಗೂ ಘತ್ತರಗಾ ಗ್ರಾಮದ ಜಮೀನೊಂದರಲ್ಲಿ ₹ 80 ಸಾವಿರ ಮೌಲ್ಯದ 40 ಟ್ರ್ಯಾಕ್ಟರ್‌ಗಳಷ್ಟು ಮರಳು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‌ಐ ಮಹಿಬೂಬ್ ಅಲಿ, ಹೆಡ್‌ ಕಾನ್‌ಸ್ಟೆಬಲ್‌ಗಳಾದ ರಾಜಶೇಖರ ರಾಠೋಡ, ಮಹೇಶ ಕಾನ್‌ಸ್ಟೆಬಲ್‌ಗಳಾದ ಇಮಾಮ್, ಮಹೇಶ ಪಾಟೀಲ, ವಿಶ್ವನಾಥ ಅವರು ದಾಳಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.