ಕಲಬುರ್ಗಿ: ಗುಲಬರ್ಗಾ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ರಾಜಕುಮಾರ ಎಸ್. ಕಡಗಂಚಿ ಚುನಾಯಿತರಾದರು.
ಬುಧವಾರ ನಡೆದ ಚುನಾವಣೆಯಲ್ಲಿ ರಾಜಕುಮಾರ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಯ್ಯದ್ ಮಸ್ತಾನ್ ಅವರನ್ನು 234 ಮತಗಳ ಅಂತರದಿಂದ ಪರಾಭವಗೊಳಿಸಿದರು. ರಾಜಕುಮಾರ ಅವರು 638 ಮತಗಳನ್ನು ಪಡೆದರೆ ಮಸ್ತಾನ್ ಅವರು 404 ಮತಗಳನ್ನು ಪಡೆದರು. ಉಪಾಧ್ಯಕ್ಷರಾಗಿ ಫತ್ರುಬಿ ಖಾಸಿಂ ಶಾ 388 ಮತಗಳನ್ನು ಪಡೆದು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎನ್. ಕಪನೂರ (725), ಜಂಟಿ ಕಾರ್ಯದರ್ಶಿಯಾಗಿ ದೇವನಾಥ ಎಸ್. ಮಾಳಗೆ (690), ಖಜಾಂಚಿಯಾಗಿ ವಿಶ್ವರಾಧ್ಯ ಕೆ. ಇಜೇರಿ 793 ಮತಗಳನ್ನು ಪಡೆದು ಆಯ್ಕೆಯಾದರು.
ಸಂಘದ ಹೈಕೋರ್ಟ್ ಘಟಕದ ಉಪಾಧ್ಯಕ್ಷರಾಗಿ ಬಸವರಾಜ ಆರ್. ಮಠ (188) ಚುನಾಯಿತರಾದರು. ಪ್ರಧಾನ ಕಾರ್ಯದರ್ಶಿಯಾಗಿ ಗೌರೀಶ ಎಸ್. ಕಾಶೆಂಪೂರ (182), ಜಂಟಿ ಕಾರ್ಯದರ್ಶಿಯಾಗಿ ವೀರಶೆಟ್ಟಿ ಕೊಂಡಂಪಲ್ಲಿ (109) ಹಾಗೂ ಖಜಾಂಚಿಯಾಗಿ ನಾಗರಾಜ ಪಾಟೀಲ 183 ಮತಗಳನ್ನು ಪಡೆದು ಆಯ್ಕೆಯಾದರು.
ಮುಖ್ಯ ಚುನಾವಣಾಧಿಕಾರಿ ಗಂಗಾಧರ ಬಿ.ಮುನ್ನಳ್ಳಿ, ಸಹಾಯಕ ಚುನಾವಣಾಧಿಕಾರಿ ವೀರನಗೌಡ ಬಿರಾದಾರ ನೂತನ ಮಂಡಳಿಯನ್ನು ಘೋಷಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.