ಕಲಬುರ್ಗಿ: ಕಮಲಾಪುರ ತಾಲ್ಲೂಕಿನ ಶ್ರೀಚಂದ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಗ್ರಾಮದ ಬೀರಶೆಟ್ಟಿ ಬೋದನವಾಡಿ (28) ಎಂಬುವವರ ಶವ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ಹೊಲದಲ್ಲಿ ಕೆಲಸ ಮುಗಿಸಿಕೊಂಡು ಊರಿಗೆ ಭಾನುವಾರ ಸಂಜೆ ಬೈಕ್ ಮೇಲೆ ಬರುವಾಗ ಹಳ್ಳ ದಾಟಲು ಯತ್ನಿದಾಗ ಪ್ರವಾಹಕ್ಕೆ ಸಿಲುಕಿ ಬೈಕ್ಸ್ಕಿಡ್ ಆಗಿ ಬಿದ್ದಿದೆ. ಅದನ್ನು ಎತ್ತಿಕೊಂಡು ಚಾಲನೆ ಮಾಡಲು ಸುಮಾರು ಹೊತ್ತು ಯತ್ನಿಸಿದ್ದಾರೆ. ಆದರೆ, ವಾಹನದ ಎಂಜಿನ್ ಚಾಲೂ ಆಗಿಲ್ಲ. ತಕ್ಷಣ ಗ್ರಾಮಸ್ಥರು ಹಳ್ಳದ ಬಳಿ ಧಾವಿಸಿ ಬೀರಶೆಟ್ಟಿ ಅವರತ್ತ ಹಗ್ಗವನ್ನು ಎಸೆದಿದ್ದಾರೆ. ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಳ್ಳಬೇಕು ಎನ್ನುವಷ್ಟರಲ್ಲಿ ನೀರಿನ ಸೆಳೆತ ಹೆಚ್ಚಾಗಿ ಕೊಚ್ಚಿಕೊಂಡು ಹೋಗಿದ್ದರು.
ಆಳಂದ ತಾಲ್ಲೂಕಿನ ನರೋಣಾ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ ಸೋಮವಾರ ಶವ ಪತ್ತೆ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.