ADVERTISEMENT

7ರವರೆಗೆ ಉಚಿತ ವಾಹನ ನೀಡಲು ನಿರ್ಧಾರ

ಜಿಲ್ಲಾ ಗುತ್ತಿಗೆದಾರರ ಅಸೋಸಿಯೇಷನ್‌ ಸಭೆಯಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 1:37 IST
Last Updated 1 ಜೂನ್ 2021, 1:37 IST
‌ಕಲಬುರ್ಗಿಯಲ್ಲಿ ಸೋಮವಾರ ನಡೆದ  ಜಿಲ್ಲಾ ಗುತ್ತಿಗೆದಾರರ ಸಭೆಯಲ್ಲಿ ಜಗನ್ನಾಥ ಬಿ. ಶೇಗಜಿ ಮಾತನಾಡಿದರು
‌ಕಲಬುರ್ಗಿಯಲ್ಲಿ ಸೋಮವಾರ ನಡೆದ  ಜಿಲ್ಲಾ ಗುತ್ತಿಗೆದಾರರ ಸಭೆಯಲ್ಲಿ ಜಗನ್ನಾಥ ಬಿ. ಶೇಗಜಿ ಮಾತನಾಡಿದರು   

ಕಲಬುರ್ಗಿ: ನಗರದಲ್ಲಿ ಸೋಮವಾರ ಜಿಲ್ಲಾ ಗುತ್ತಿಗೆದಾರರ ಅಸೋಸಿಯೇಷನ್‌ ಸಭೆ ನಡೆಯಿತು. ಅಸೋಸಿಯೇಷನ್‌ ಅಧ್ಯಕ್ಷ ಜಗನ್ನಾಥ ಬಿ. ಶೇಗಜಿ ನೇತೃತ್ವದಲ್ಲಿ ವಿವಿಧ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.

ಮೇ 24ರಿಂದ ರಸ್ತೆ ಹಾಗೂ ಕಟ್ಟಡ ಕಾರ್ಮಿಕರ ಸಹಾಯ ಮಾಡಲು ಏಳು ವಾಹನಗಳನ್ನು ನೀಡಲಾಗಿತ್ತು. ಈ ವಾಹನಗಳು ಯಾವ ಕಡೆ ಸಂಚರಿಸಿವೆ ಹಾಗೂ ಖರ್ಚು– ವೆಚ್ಚ ಏನು. ನಿಜವಾಗಿ ಕಾರ್ಮಿಕರಿಗೆ ಉಪಯೋಗವಾಗುತ್ತಿವೆಯೇ ಎಂಬ ಬಗ್ಗೆ ಕೂಡ ತಿಳಿದುಕೊಳ್ಳಲಾಯಿತು.

ಜೂನ್‌ 7ರವರೆಗೆ ಉಚಿತ ಸೇವೆಯನ್ನು ಮುಂದುವರಿಸಲು ಅಸೋಸಿಯೇಷನ್‌ನ ಕಾರ್ಯದರ್ಶಿಗಳಿಗೆ ಸೂಚಿಸಲಾಯಿತು.

ADVERTISEMENT

ಕೆಕೆಆರ್‌ಡಿಬಿ, ಕೆಪಿಡಬ್ಲ್ಯೂಡಿ, ನೀರವಾವರಿ, ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಟೆಂಡರ್ ಬಗ್ಗೆ ಕೂಡ ಸದಸ್ಯರು ಚರ್ಚಿಸಿದರು.

ಅಸೋಸಿಯೇಷನ್ ಉಪಾಧ್ಯಕ್ಷ ಮೋಹಸಿನ್ ಎಂ. ಪಟೇಲ್, ಪ್ರಧಾನ ಕಾರ್ಯದರ್ಶಿ ಸಂಜಯ ಆರ್.ಕೆ, ಸರದಾರಯ್ಯ ಗುತ್ತೇದಾರ, ಸಲೀಮ್ ಅಟ್ಟೂರ್, ರಾಜಶೇಖರ ಪಾಟೀಲ್, ಮನ್ಸೂರ ತೊಂಚಿ, ಗುರುನಂಜಯ್ಯ ಸ್ವಾಮಿ, ಶಿವಾನಂದ ಪಾಟೀಲ, ರಾಜಶೇಖರ ಎಂಕಚಿ, ಮಡೆಪ್ಪ ಗುತ್ತೇದಾರ, ಚನ್ನಯ್ಯ ಮಠ, ಸಿರಾಜ್ ಪಟೇಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.