ಕಲಬುರ್ಗಿ: ತಾಲ್ಲೂಕಿನ ವೆಂಕಟಬೇನೂರ ಗ್ರಾಮದ ಕಿರಾಣಿ ಅಂಗಡಿಯಲ್ಲಿ ಇರಿಸಿದ್ದ 13.86 ಲೀಟರ್ ಮದ್ಯ ಹಾಗೂ 15.28 ಲೀಟರ್ ಬಿಯರ್ ಅನ್ನು ಕಲಬುರ್ಗಿ ವಲಯ 1ರ ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.
ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ದುರ್ಗೇಶ ರಾಜೇಂದ್ರ ಬೋವಿ ಪರಾರಿಯಾಗಿದ್ದಾನೆ. ಮದ್ಯದ ಮೊತ್ತ ₹ 7,500. ಅಬಕಾರಿ ನಿರೀಕ್ಷಕ ಬಾಲಕೃಷ್ಣ ಮುದಗಣ್ಣ, ಉಪ ನಿರೀಕ್ಷಕ ದಾವಲಸಾಬ್ ಶಿಂದೋಗಿ, ಸಿಬ್ಬಂದಿಯಾದ ರಾಜೇಂದ್ರ, ಮೋಹನ, ಶಿವಪ್ಪಗೌಡ, ಅರವಿಂದ, ವಸಂತ ಕಾರ್ಯಾಚರಣೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.