ADVERTISEMENT

ಕಲಬುರಗಿ | ಒಳ ಮೀಸಲಾತಿ: ಮಾದಿಗ‌ ಸಮುದಾಯದಿಂದ ಡಿ.ಸಿ ಕಚೇರಿಗೆ ನುಗ್ಗಲು ಯತ್ನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 10:37 IST
Last Updated 1 ಆಗಸ್ಟ್ 2025, 10:37 IST
<div class="paragraphs"><p>ಕಲಬುರಗಿ ಜಿಲ್ಲಾಧಿಕಾರಿ ‌ಕಚೇರಿಗೆ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದರು</p></div>

ಕಲಬುರಗಿ ಜಿಲ್ಲಾಧಿಕಾರಿ ‌ಕಚೇರಿಗೆ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದರು

   

ಕಲಬುರಗಿ: ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ನಗರದಲ್ಲಿ ಮಾದಿಗ‌ ಮಹಾ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ ಮನವಿ ಸಲ್ಲಿಕೆ ಸಂಬಂಧಿಸಿದಂತೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ‌ಕಚೇರಿಗೆ ನುಗ್ಗಲು ‌ಯತ್ನಿಸಿದ್ದು, ಉದ್ವಿಗ್ನ ‌ಪರಿಸ್ಥಿತಿ ನಿರ್ಮಾಣವಾಗಿದೆ.

ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಅವರೇ ಬರಬೇಕು. ತಮ್ಮ ಅಹವಾಲು ‌ಆಲಿಸಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ‌ಕಚೇರಿ ಗೇಟ್ ಎದುರು ಧರಣಿ‌ ಕುಳಿತಿದ್ದಾರೆ.

ADVERTISEMENT

ಮನವಿ ಸ್ವೀಕರಿಸಲು ಹೆಚ್ಚುವರಿ ‌ಜಿಲ್ಲಾಧಿಕಾರಿ‌ ರಾಯಪ್ಪ ಹುಣಸಗಿ ಬಂದರೂ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಅವರೇ ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಪೊಲೀಸರು ಮನವೊಲಿಸಲು ಯತ್ನಿಸಿದರೂ ಪ್ರತಿಭಟನಾಕಾರರು ಜಗ್ಗದೆ ಧರಣಿ ಕುಳಿತಿದ್ದಾರೆ. ಜೈ ಮಾದಿಗ‌ ಜೈ, ಜೈ ಮಾದಿಗ ಘೋಷಣೆ‌ ಮೊಳಗಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ‌ಊಟಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ‌ಸಮಜಾಯಿಷಿ ನೀಡಿದರೂ ಧರಣಿ ಮುಂದುವರಿಸಿದ್ದಾರೆ. ಒಳಮೀಸಲಾತಿಗಾಗಿ 35 ವರ್ಷಗಳಿಂದ ಕಾಯುತ್ತಿದ್ದೇವೆ. ಅದರಂತೆ ಜಿಲ್ಲಾಧಿಕಾರಿ ಬರುವ ತನಕ‌ ಕಾದು ಅವರಿಗೇ ಮನವಿ ಸಲ್ಲಿಸಲಾಗುವುದು ಎಂದು ಮುಖಂಡರು ಪಟ್ಟು ಹಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.