ADVERTISEMENT

ಚೌಕಿ ತಾಂಡಾದಲ್ಲಿ ಮೇರಾ ಹಬ್ಬ ಸಂಭ್ರಮ

ಸಂಸದ ಡಾ.ಉಮೇಶ ಜಾಧವ ಭಾಗಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 6:49 IST
Last Updated 28 ಅಕ್ಟೋಬರ್ 2022, 6:49 IST
ಚಿಂಚೋಳಿ ತಾಲ್ಲೂಕು ಚೌಕಿ ತಾಂಡಾದಲ್ಲಿ ಕಲಬುರಗಿ ಸಂಸದ ಡಾ. ಉಮೇಶ ಜಾಧವ ಮಂಗಳವಾರ ಕಾಳಿಮಾಸ ಸಂಭ್ರಮದಲ್ಲಿ ಭಾಗಿಯಾಗಿ ಮೇರಾ ಆಚರಿಸಿದರು
ಚಿಂಚೋಳಿ ತಾಲ್ಲೂಕು ಚೌಕಿ ತಾಂಡಾದಲ್ಲಿ ಕಲಬುರಗಿ ಸಂಸದ ಡಾ. ಉಮೇಶ ಜಾಧವ ಮಂಗಳವಾರ ಕಾಳಿಮಾಸ ಸಂಭ್ರಮದಲ್ಲಿ ಭಾಗಿಯಾಗಿ ಮೇರಾ ಆಚರಿಸಿದರು   

ಚಿಂಚೋಳಿ: ತಾಲ್ಲೂಕಿನ ಚಿಮ್ಮನಚೋಡ ಬಳಿಯ ಚೌಕಿ ತಾಂಡಾದಲ್ಲಿ ಕಲಬುರಗಿ ಸಂಸದ ಡಾ.ಉಮೇಶ ಜಾಧವ ದೀಪಾವಳಿ ಆಚರಿಸಿದರು.

ಮಂಗಳವಾರ ಕಾಳಿಮಾಸ ಆಚರಣೆಯಲ್ಲಿ ಭಾಗವಹಿಸಿದ ಅವರು, ಮೇರಾ ಸಮರ್ಪಿಸಿದ ಯುವತಿಯರಿಗೆ ಕಾಣಿಕೆ ನೀಡಿದರು.
ತಾಂಡಾದ ನಿವಾಸಿಗಳು ಹಾಗೂ ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ಬೆಂಬಲಿಗರ ಜತೆಗೆ ನೃತ್ಯ ಮಾಡಿ, ಹಬ್ಬದ ಸಡಗರ ಹೆಚ್ಚಿಸಿದ್ದರು. ಬುಧವಾರವೂ ತಾಲ್ಲೂಕಿನ ವಿವಿಧೆಡೆ ಸಂಚರಿಸಿದ ದೀಪಾವಳಿ ಶುಭಾಶಯ ಹಂಚಿಕೊಂಡ ಸಂಸದ ಉಮೇಶ ಜಾಧವ ವಿವಿಧ ತಾಂಡಾಗಳಲ್ಲಿ ಯುವತಿಯರ ಗೋದನ ಪೂಜೆ ವೀಕ್ಷಿಸಿ ಪ್ರೋತ್ಸಾಹಿಸಿದರು.

ತಾ.ಪಂ. ಮಾಜಿ ಅಧ್ಯಕ್ಷ ಶಾಮರಾವ್ ರಾಠೋಡ್, ಅಶೋಕ ಚವ್ಹಾಣ, ಮಾಜಿ ಸದಸ್ಯ ಪ್ರೇಮಸಿಂಗ್ ಜಾಧವ, ಗ್ರಾ.ಪಂ. ಮಾಜಿ ಅಧ್ಯಕ್ಷ ಹೀರಾಸಿಂಗ್ ರಾಠೋಡ್, ಪುರಸಭೆ ಮಾಜಿ ಉಪಾಧ್ಯಕ್ಷ ರಾಜು ಪವಾರ, ಬೀದರ್ ಗುಲ್ಬರ್ಗ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ದಿವಾಕರರಾವ್ ಜಹಾಗೀರದಾರ, ಮಲ್ಲು ಕೂಡಾಂಬಲ್, ರಾಮರೆಡ್ಡಿ ಪೊಲೀಸ್ ಪಾಟೀಲ, ಚಂದು ನಾಯಕ್, ಮುನಿಸಿಂಗ್ ಕಾರಭಾರಿ, ಓಂನಾಥ ಜಾಧವ, ಪಂಡರಿ, ಯಶೋಧಾಬಾಯಿ ತುಕಾರಾಮ, ಜೀತು ರಾಠೋಡ್, ಶಾಮರಾವ್, ವೀರಶೆಟ್ಟಿ ರಾಠೋಡ್ ಗಾಯಕ, ಗಣೇಶ ನಾಯಕ್, ಶಂಕರ ರಾಠೋಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.