ADVERTISEMENT

ಕನ್ನಡ ಮತ್ತು ಸಂಸ್ಕೃತಿ ಸಚಿವರ ಸಮ್ಮಖದಲ್ಲಿಯೇ ಅರೆಬೆತ್ತಲೆ ಸೇವೆ!

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 9:24 IST
Last Updated 5 ಮಾರ್ಚ್ 2021, 9:24 IST
   

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಕನ್ನಡ ಮತ್ತು ಸಂಸ್ಕೃತಿ ಸಚಿವಅರವಿಂದ ಲಿಂಬಾವಳಿ ಅವರಸಮ್ಮುಖದಲ್ಲಿಯೇ ಯಲ್ಲಮ್ಮ ದೇವಿಯ ಭಕ್ತರು ಅರೆಬೆತ್ತಲೆ ಸೇವೆ ಸಲ್ಲಿಸಿದ ಘಟನೆ‌‌ ಇಲ್ಲಿಗೆ ಸಮೀಪದ ತೆಲಂಗಾಣ ರಾಜ್ಯದ ಕೊತ್ಲಾಪುರ ಯಲ್ಲಮ್ಮ ದೇವಸ್ಥಾನದಲ್ಲಿ ಶುಕ್ರವಾರ ನಡೆಯಿತು.

ಕಲಬುರ್ಗಿ ನಗರದ ಭಕ್ತರು ಇಲ್ಲಿಗೆ ಕುಟುಂಬ ಸಮೇತ ಬಂದು ದೇವಿಗೆ ಹರಕೆ ತೀರಿಸಿದರು. ಮೈತುಂಬಾ ಬೇವಿನ ತಪ್ಪಲು ಕಟ್ಟಿಕೊಂಡು ಮಹಿಳೆಯೊಬ್ಬರು ತಲೆಯ ಮೇಲೆ ಕೊಡ ಹೊತ್ತು ವಾದ್ಯ ಬಾರಿಸುತ್ತ ಗರ್ಭಗುಡಿ ಹಾಗೂ ಎದುರಿನ ಪ್ರಾಂಗಣಕ್ಕೆ ಹಲವು ಸುತ್ತು ಹಾಕಿದರು ಆಗ ಸಚಿವರು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT